<p><strong>ಬೀದರ್:</strong> ನಗರದ 151 ಕಡೆ ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆ ಮಾಡಿ ಭಕ್ತಿ, ಶ್ರದ್ಧೆಯಿಂದ ಪೂಜೆ ಸಲ್ಲಿಸಲಾಗುತ್ತಿದೆ. ರಾಜ್ಯ ಸರ್ಕಾರ ಕೊನೆಯ ಕ್ಷಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಅನುಮತಿ ನೀಡಿದರೂ ಮೂರ್ತಿಗಳಿಗೆ ಅಲಂಕಾರ ಮಾಡಿ ಮಂಟಪಗಳು ವಿದ್ಯುತ್ ದೀಪಗಳಿಂದ ಝಗಮಗಿಸುವಂತೆ ಮಾಡಲಾಗಿದೆ.</p>.<p>ಕೋವಿಡ್ ಕಾರಣ ಭಕ್ತರು ಈ ಬಾರಿ ಗಣನಾಯಕನನ್ನು ಅತ್ಯಂತ ಸರಳವಾಗಿಯೇ ಬರ ಮಾಡಿಕೊಂಡಿದ್ದಾರೆ. ಮಂಡಳಿಗಳು ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ. ಕೇವಲ ಪೂಜೆಗೆ ಮಹತ್ವ ನೀಡಲಾಗಿದೆ.</p>.<p>ನಗರದ ಕ್ರಾಂತಿ ಗಣೇಶ, ಹರಳಯ್ಯ ವೃತ್ತ, ರೋಟರಿ ವೃತ್ತ, ವಿದ್ಯಾನಗರ, ಕುಂಬಾರವಾಡ, ಗುಂಪಾ, ನಾವದಗೇರಿ, ಲಾಡಗೇರಿ, ಚಿದ್ರಿ ರಸ್ತೆ, ಎಲ್ಐಜಿ, ಶಿವನಗರ, ಗುರುನಗರ, ಮಾಧವನಗರ ಕಾಲೊನಿ, ಆದರ್ಶ ಕಾಲೊನಿ, ಬಸವನಗರ, ಭೂವಿಗಲ್ಲಿ, ಪಾಠಕ್ಗಲ್ಲಿ ಹಾಗೂ ನೌಬಾದ್ನಲ್ಲಿ ಅಂದದ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ.</p>.<p><strong>ಗಣೇಶನ ದರ್ಶನ ಪಡೆದ ಸಚಿವ ಚವಾಣ್:</strong>ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಶನಿವಾರ ನಗರದ ವಿವಿಧೆಡೆ ಸಂಚರಿಸಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಪ್ರತಿಷ್ಠಾಪಿಸಿರುವ ಗಣಪತಿಗಳ ದರ್ಶನ ಪಡೆದರು.</p>.<p>ಕೆ.ಇ.ಬಿ ಹತ್ತಿರ ಯುವಾ ಹಿಂದೂ ಸೇನಾ ಗಣೇಶ ಮಂಡಳ, ಬಾಲ ಹನುಮಾನ ಗಣೇಶ ಮಂಡಳದಲ್ಲಿ ಏಕದಂತನ ದರ್ಶನ ಮಾಡಿ ಆರತಿ ಬೆಳಗಿದರು.</p>.<p>ಸರಳ ಮತ್ತು ಸುರಕ್ಷತಾ ಕ್ರಮಗಳೊಂದಿಗೆ ಹಬ್ಬ ಆಚರಣೆ ಮಾಡಬೇಕು. ಗಣೇಶ ವಿಸರ್ಜನೆ ಕಾರ್ಯಕ್ರಮವೂ ಸರಳವಾಗಿ ನಡೆಯಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.</p>.<p>ಗಣೇಶ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ, ಮುಖಂಡರಾದ ಬಸವರಾಜ ಪವಾರ್, ಅರಹಂತ ಸಾವಳೆ, ವೀರಶೆಟ್ಟಿ ಖ್ಯಾಮಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ನಗರದ 151 ಕಡೆ ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆ ಮಾಡಿ ಭಕ್ತಿ, ಶ್ರದ್ಧೆಯಿಂದ ಪೂಜೆ ಸಲ್ಲಿಸಲಾಗುತ್ತಿದೆ. ರಾಜ್ಯ ಸರ್ಕಾರ ಕೊನೆಯ ಕ್ಷಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಅನುಮತಿ ನೀಡಿದರೂ ಮೂರ್ತಿಗಳಿಗೆ ಅಲಂಕಾರ ಮಾಡಿ ಮಂಟಪಗಳು ವಿದ್ಯುತ್ ದೀಪಗಳಿಂದ ಝಗಮಗಿಸುವಂತೆ ಮಾಡಲಾಗಿದೆ.</p>.<p>ಕೋವಿಡ್ ಕಾರಣ ಭಕ್ತರು ಈ ಬಾರಿ ಗಣನಾಯಕನನ್ನು ಅತ್ಯಂತ ಸರಳವಾಗಿಯೇ ಬರ ಮಾಡಿಕೊಂಡಿದ್ದಾರೆ. ಮಂಡಳಿಗಳು ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ. ಕೇವಲ ಪೂಜೆಗೆ ಮಹತ್ವ ನೀಡಲಾಗಿದೆ.</p>.<p>ನಗರದ ಕ್ರಾಂತಿ ಗಣೇಶ, ಹರಳಯ್ಯ ವೃತ್ತ, ರೋಟರಿ ವೃತ್ತ, ವಿದ್ಯಾನಗರ, ಕುಂಬಾರವಾಡ, ಗುಂಪಾ, ನಾವದಗೇರಿ, ಲಾಡಗೇರಿ, ಚಿದ್ರಿ ರಸ್ತೆ, ಎಲ್ಐಜಿ, ಶಿವನಗರ, ಗುರುನಗರ, ಮಾಧವನಗರ ಕಾಲೊನಿ, ಆದರ್ಶ ಕಾಲೊನಿ, ಬಸವನಗರ, ಭೂವಿಗಲ್ಲಿ, ಪಾಠಕ್ಗಲ್ಲಿ ಹಾಗೂ ನೌಬಾದ್ನಲ್ಲಿ ಅಂದದ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ.</p>.<p><strong>ಗಣೇಶನ ದರ್ಶನ ಪಡೆದ ಸಚಿವ ಚವಾಣ್:</strong>ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಶನಿವಾರ ನಗರದ ವಿವಿಧೆಡೆ ಸಂಚರಿಸಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಪ್ರತಿಷ್ಠಾಪಿಸಿರುವ ಗಣಪತಿಗಳ ದರ್ಶನ ಪಡೆದರು.</p>.<p>ಕೆ.ಇ.ಬಿ ಹತ್ತಿರ ಯುವಾ ಹಿಂದೂ ಸೇನಾ ಗಣೇಶ ಮಂಡಳ, ಬಾಲ ಹನುಮಾನ ಗಣೇಶ ಮಂಡಳದಲ್ಲಿ ಏಕದಂತನ ದರ್ಶನ ಮಾಡಿ ಆರತಿ ಬೆಳಗಿದರು.</p>.<p>ಸರಳ ಮತ್ತು ಸುರಕ್ಷತಾ ಕ್ರಮಗಳೊಂದಿಗೆ ಹಬ್ಬ ಆಚರಣೆ ಮಾಡಬೇಕು. ಗಣೇಶ ವಿಸರ್ಜನೆ ಕಾರ್ಯಕ್ರಮವೂ ಸರಳವಾಗಿ ನಡೆಯಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.</p>.<p>ಗಣೇಶ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ, ಮುಖಂಡರಾದ ಬಸವರಾಜ ಪವಾರ್, ಅರಹಂತ ಸಾವಳೆ, ವೀರಶೆಟ್ಟಿ ಖ್ಯಾಮಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>