ಕೃಷಿ ತಜ್ಞ ಡಾ.ರವಿ ದೇಶಮುಖ ಮಾತನಾಡಿ, ‘ಜಿಲ್ಲೆಯಲ್ಲಿ 85 ಮಿಲಿ ಮೀಟರ್ ಸರಾಸರಿ ಮಳೆ ಆಗುತ್ತದೆ ಇದು ಉತ್ತಮ ಬೆಳೆ ಬೆಳೆಯಲು ಅನುಕೂಲಕರ ಆಗಿದ್ದರೂ ಪ್ರತಿವರ್ಷ ಸಮರ್ಪಕವಾಗಿ ಮಳೆ ಆಗುವುದಿಲ್ಲ. ಹೀಗಾಗಿ ಸಂಕಟ ಅನುಭವಿಸಬೇಕಾಗುತ್ತಿದೆ. ಜಿಲ್ಲೆಯಲ್ಲಿ ಶೇ 11 ರಷ್ಟು ಮಾತ್ರ ನೀರಾವರಿ ಆಧಾರಿತ ಕೃಷಿ ಭೂಮಿಯಿದೆ. ಜಲಾಶಯಗಳ ಹೆಚ್ಚಳದಿಂದ ಮತ್ತು ನೀರಾವರಿ ಯೋಜನೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಜಾರಿಗೊಳಿಸಿ ಕೃಷಿಯಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬಹುದು’ ಎಂದರು.