ನಸುಕಿನ ಜಾವದಿಂದಲೇ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ದೇವಸ್ಥಾನದತ್ತ ಮುಖ ಮಾಡಿದರು. ಮಧ್ಯಾಹ್ನ ಭಕ್ತರ ಸಂಖ್ಯೆ ಹೆಚ್ಚಾಯಿತು. ಮಲ್ಲಣ್ಣ ದೇವರ ದರುಶನಕ್ಕೆ ಮುನ್ನ ದೇವಸ್ಥಾನ ಪಕ್ಕದ ಪುಷ್ಕರಣಿಯಲ್ಲಿ ಸ್ನಾನ, ಮುಖ ಮಾರ್ಜನೆ ಮಾಡಿಕೊಂಡು ಸರತಿ ಸಾಲಿನಲ್ಲಿ ನಿಂತು ಮಲ್ಲಣ್ಣ ದೇವರ ದರುಶನ ಪಡೆದರು.