ಬೀದರ್: ಇಲ್ಲಿಯ ರಾಜಗೊಂಡ ಕಾಲೊನಿಯಲ್ಲಿ ವಿಶ್ವ ಆದಿವಾಸಿ ದಿನ ಆಚರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಖಿಲ ಭಾರತೀಯ ಆದಿವಾಸಿ ಗೊಂಡ ಸಂಘದ ಪ್ರಧಾನ ಕಾರ್ಯದರ್ಶಿ ಮಾಳಪ್ಪ ಅಡಸಾರೆ ಅವರು, ಆದಿವಾಸಿಗಳೇ ದೇಶದ ಮಾಲೀಕರು ಎಂದು ಹೇಳಿದರು.
ಆಣದೂರಿನ ಭಂತೆ ಧಮ್ಮಾನಂದ ಥೆರೊ, ಭಂತೆ ಜ್ಞಾನಸಾಗರ, ವಿಶಾಲ ಮಹಾರಾಜ, ರತನ್ ಮಹಾರಾಜ ಸಾನಿಧ್ಯ ವಹಿಸಿದ್ದರು.
ಶಾಮು ಪುಶ್ನಾಕೆ, ವಿಜಯಕುಮಾರ ಡುಮ್ಮೆ, ವಿವೇಕ ವಿಶಾಲ ಮೊದಲಾದವರು ಇದ್ದರು.