‘ಜೂನ್ 17ರಂದು ರೈತ ಸಂಪರ್ಕ ಕೇಂದ್ರಕ್ಕೆ ಬಂದ ರೈತರು ಬೀಜ ಕೊಡಲು ಕೇಳಿದರು. ಸದ್ಯ ಬೀಜದ ದಾಸ್ತಾನು ಇಲ್ಲ ಎಂದು ಮನವರಿಕೆ ಮಾಡಿದೆ. ಆದರೆ, ಅವರಲಿದ್ದ ಕೆಲವರು ಘೋಷಣೆ ಕೂಗಿ ಬೇಕಾಬಿಟ್ಟಿ ಮಾತನಾಡಿದರು. ನೀವು ಹೊರಗೆ ಬನ್ನಿ ಕಚೇರಿಗೆ ಬೀಗ ಹಾಕುತ್ತೇವೆ ಎಂದು ಹೊರ ಕಳುಹಿಸಿದರು. ನನ್ನನ್ನು ಬಲವಂತದಿಂದ ಹಿಡಿದು ಗೇಟಿಗೆ ಕಟ್ಟಿ ಹಾಕಿ ವಿಡಿಯೊ ಮಾಡಿದರು. ಈ ಘಟನೆಯಿಂದ ನನ್ನ ಮನಸ್ಸಿಗೆ ಅಘಾತವಾಗಿದೆ. ನನ್ನ ರಕ್ತದೊತ್ತಡ ಹೆಚ್ಚಾಗಿದೆ. ವಾರದ ಹಿಂದೆಯಷ್ಟೇ ಕೊರೊನಾ ಸೋಂಕಿನಿಂದ ಹೊರ ಬಂದಿರುವುದರಿಂದ ಈಗ ನನಗೆ ಮತ್ತಷ್ಟು ನಿಶ್ಯಕ್ತಿಯಾಗಿ ಆರೋಗ್ಯ ಕೆಟ್ಟಿದೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.