ಸನ್ಮಾನ: ನಾಲ್ಕು ಶತಮಾನಗಳಿಂದ ಪರುಷಕಟ್ಟೆಯ ಜಾಗದ ಸಮಸ್ಯೆ ಇತ್ತು. ಅದನ್ನು ಬಗೆಹರಿಸುವಲ್ಲಿ ಸಹಕರಿಸಿದ ಹಾಗೂ ಮುಸ್ಲಿಮರ ಕೆಲ ಮನೆಗಳನ್ನು ತೆರವುಗೊಳಿಸಿ ಪರುಷಕಟ್ಟೆಗೆ ಹೆಚ್ಚಿನ ಜಾಗ ಒದಗಿಸುವ ಭೂಸ್ವಾಧೀನ ಪ್ರಕ್ರಿಯೆಗೆ ಸಹಕಾರ ನೀಡಿದ ಜಮೈತ್ ಉಲ್ ಕುರೇಶಿ ಸಮಾಜ ಸಂಘದ ಸಲಹಾ ಮಂಡಳಿ ಅಧ್ಯಕ್ಷ ಮುಜಾಹಿದ್ಪಾಷಾ ಕುರೇಶಿ, ಅಬ್ದುಲ್ ಗಫಾರಸಾಬ್ ಕುರೇಶಿ, ಮುಸ್ತಾಕ್ ಚೌಧರಿ, ಯುನೂಸ್ ಕುರೇಶಿ ಹಾಗೂ ಅಕ್ಬರ್ ಅಲಿ ಕುರೇಶಿ ಅವರನ್ನು ಮುಖ್ಯಮಂತ್ರಿ ಸನ್ಮಾನಿಸಿದರು.