ಲೋಕೇಶ ಮೋಳಕೆರೆ, ಜ್ಞಾನೇಶ್ವರ ರಾಚಪ್ಪನೋರ್, ರಾಹುಲ ಶಾಶೆಟ್ಟೆ, ನಾಗೇಶ ಬಾವಗೆ, ಆಕಾಶ ಮುತ್ತೆ, ಪ್ರಶಾಂತ ಅಂಬಾಡೆ, ಶಿವಶಂಕರ ಕಾಮಣ್ಣ, ಪ್ರವೀಣ ಬಿರಾದಾರ, ಚೇತನ ಹೀರೋಳೆ ಹಾಗೂ ಅಂಬರೀಶ ಕೋರಾಳೆ ಅವರನ್ನೊಳಗೊಂಡ ಹತ್ತು ಜನ ಯುವಕರ ತಂಡವು ಎರಡು ವಾರಗಳಿಂದ ಅನಾಥರಿಗೆ ಸಂಜೆ ವೇಳೆ ಒಂದು ಹೊತ್ತಿನ ಊಟ ನೀಡುತ್ತಿದೆ. ಇದರಲ್ಲಿ ಕೆಲವರು ಕಾಲೇಜು ಶಿಕ್ಷಣ ಪೊರೈಸಿದ್ದರೆ, ಇನ್ನೂ ಕೆಲವರು ಸಣ್ಣಪುಟ್ಟ ಉದ್ಯೋಗದಲ್ಲಿದ್ದಾರೆ. ಇವರೆಲ್ಲ ಸ್ವಂತ ಹಣ ಸಂಗ್ರಹಿಸಿ ಅನಾಥರಿಗೆ ನಿತ್ಯ ದಾಸೋಹ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ.