<p><strong>ಬೀದರ್:</strong> ‘ಕನ್ನಡ ಸಾಹಿತ್ಯ, ಕಾವ್ಯಲೋಕಕ್ಕೆ ಶೋಭೆ ತಂದುಕೊಟ್ಟ ಶಬ್ದ ಗಾರುಡಿಗ ದ.ರಾ.ಬೇಂದ್ರೆ’ ಎಂದು ಪ್ರಾಂಶುಪಾಲ ಪಿ. ವಿಠ್ಠಲ ರಡ್ಡಿ ತಿಳಿಸಿದರು.</p>.<p>ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನ ಕನ್ನಡ ವಿಭಾಗದಿಂದ ಶುಕ್ರವಾರ ಏರ್ಪಡಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ.ಬೇಂದ್ರೇಯವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.</p>.<p>ಅನೇಕ ಕಾವ್ಯಗಳನ್ನು ಸರಳ ಭಾಷೆಯಲ್ಲಿ ರಚಿಸಿ, ಎಲ್ಲರ ಮನೆ ಮಾತಾದವರು ಬೇಂದ್ರೆಯವರು. ನಾಡು ಕಂಡ ಶ್ರೇಷ್ಠ ಕವಿ ಎಂದರು.</p>.<p>ಉಪ ಪ್ರಾಂಶುಪಾಲ ಅನೀಲಕುಮಾರ ಅಣದೂರೆ ಮಾತನಾಡಿ, ಅಂಬಿಕಾತನಯದತ್ತ ಕಾವ್ಯನಾಮದಿಂದ ಪ್ರಖ್ಯಾತರಾದ ಬೇಂದ್ರೇಯವರು ಕಾಲೇಜು ಹಂತದಲ್ಲಿಯೇ ಕವಿತೆಗಳನ್ನು ಬರೆಯುತ್ತಿದ್ದರು. ಅವರ ಸಾಹಿತ್ಯದಲ್ಲಿ ಉತ್ಸಾಹದ ಚಿಲುಮೆಯನುಕ್ಕಿಸಬಲ್ಲ, ನೊಂದಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರಣಯದ ಕವಿತೆಗಳು ಸೇರಿವೆ ಎಂದು ತಿಳಿಸಿದರು.</p>.<p>ಕನ್ನಡ ವಿಭಾಗದ ಮುಖ್ಯಸ್ಥೆ ರೇಣುಕಾದೇವಿ ಮಳ್ಳಿಸ್ವಾಮಿ ಮಾತನಾಡಿ, ಸಾಹಿತ್ಯ ನಮಗೆ ಪ್ರತಿ ಹೆಜ್ಜೆಗೂ ಮಾದರಿ. ರಸಋಷಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಬೇಂದ್ರೆ ಅಜ್ಜನವರು ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನವೆಂದು ಜೀವನವನ್ನು ಪ್ರತಿಕ್ಷಣವೂ ಖುಷಿಯಿಂದ ಆಸ್ವಾದಿಸಿದವರು ಎಂದರು.</p>.<p>ಪ್ರಾಧ್ಯಾಪಕಿಯರಾದ ರತಿದೇವಿ ಪ್ರಾರ್ಥನಾ ಗೀತೆ ಹಾಡಿದರೆ, ಮಲ್ಲಿಕಾರ್ಜುನ ಕೋಟೆ ಸ್ವಾಗತಿಸಿದರು. ಕಾವೇರಿ ಖಂಡ್ರೆ ವಂದಿಸಿದರು. ಕಚೇರಿಯ ಅಧೀಕ್ಷಕ ಸುಜೀತಕುಮಾರ ಬಿ. ಮತ್ತಿತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ‘ಕನ್ನಡ ಸಾಹಿತ್ಯ, ಕಾವ್ಯಲೋಕಕ್ಕೆ ಶೋಭೆ ತಂದುಕೊಟ್ಟ ಶಬ್ದ ಗಾರುಡಿಗ ದ.ರಾ.ಬೇಂದ್ರೆ’ ಎಂದು ಪ್ರಾಂಶುಪಾಲ ಪಿ. ವಿಠ್ಠಲ ರಡ್ಡಿ ತಿಳಿಸಿದರು.</p>.<p>ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನ ಕನ್ನಡ ವಿಭಾಗದಿಂದ ಶುಕ್ರವಾರ ಏರ್ಪಡಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ.ಬೇಂದ್ರೇಯವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.</p>.<p>ಅನೇಕ ಕಾವ್ಯಗಳನ್ನು ಸರಳ ಭಾಷೆಯಲ್ಲಿ ರಚಿಸಿ, ಎಲ್ಲರ ಮನೆ ಮಾತಾದವರು ಬೇಂದ್ರೆಯವರು. ನಾಡು ಕಂಡ ಶ್ರೇಷ್ಠ ಕವಿ ಎಂದರು.</p>.<p>ಉಪ ಪ್ರಾಂಶುಪಾಲ ಅನೀಲಕುಮಾರ ಅಣದೂರೆ ಮಾತನಾಡಿ, ಅಂಬಿಕಾತನಯದತ್ತ ಕಾವ್ಯನಾಮದಿಂದ ಪ್ರಖ್ಯಾತರಾದ ಬೇಂದ್ರೇಯವರು ಕಾಲೇಜು ಹಂತದಲ್ಲಿಯೇ ಕವಿತೆಗಳನ್ನು ಬರೆಯುತ್ತಿದ್ದರು. ಅವರ ಸಾಹಿತ್ಯದಲ್ಲಿ ಉತ್ಸಾಹದ ಚಿಲುಮೆಯನುಕ್ಕಿಸಬಲ್ಲ, ನೊಂದಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರಣಯದ ಕವಿತೆಗಳು ಸೇರಿವೆ ಎಂದು ತಿಳಿಸಿದರು.</p>.<p>ಕನ್ನಡ ವಿಭಾಗದ ಮುಖ್ಯಸ್ಥೆ ರೇಣುಕಾದೇವಿ ಮಳ್ಳಿಸ್ವಾಮಿ ಮಾತನಾಡಿ, ಸಾಹಿತ್ಯ ನಮಗೆ ಪ್ರತಿ ಹೆಜ್ಜೆಗೂ ಮಾದರಿ. ರಸಋಷಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಬೇಂದ್ರೆ ಅಜ್ಜನವರು ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನವೆಂದು ಜೀವನವನ್ನು ಪ್ರತಿಕ್ಷಣವೂ ಖುಷಿಯಿಂದ ಆಸ್ವಾದಿಸಿದವರು ಎಂದರು.</p>.<p>ಪ್ರಾಧ್ಯಾಪಕಿಯರಾದ ರತಿದೇವಿ ಪ್ರಾರ್ಥನಾ ಗೀತೆ ಹಾಡಿದರೆ, ಮಲ್ಲಿಕಾರ್ಜುನ ಕೋಟೆ ಸ್ವಾಗತಿಸಿದರು. ಕಾವೇರಿ ಖಂಡ್ರೆ ವಂದಿಸಿದರು. ಕಚೇರಿಯ ಅಧೀಕ್ಷಕ ಸುಜೀತಕುಮಾರ ಬಿ. ಮತ್ತಿತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>