<p><strong>ಬೀದರ್</strong>: ‘ಮನಸ್ಸು ಶಾಂತವಾದರೆ ನಿಜವಾದ ಸುಖ ಅನುಭವಿಸಲು ಸಾಧ್ಯ’ ಎಂದು ಪ್ರವಚನಕಾರ ರಾಜಯೋಗಿ ಭಾಯ್ ತಿಳಿಸಿದರು.</p>.<p>ನಗರದ ಜನವಾಡ ರಸ್ತೆಯ ಬ್ರಹ್ಮಕುಮಾರಿ ಪಾವನಧಾಮ ಕೇಂದ್ರದಲ್ಲಿ 90ನೇ ಮಹಾ ಶಿವರಾತ್ರಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಿವ ಧ್ವಜಾರೋಹಣ ಮಾಡಿ ಮಾತನಾಡಿದರು.</p>.<p>ಹೊರಗಿನ ಪರಿಸ್ಥಿತಿಗಳಿಗಿಂತ ಒಳಗಿನ ಶಾಂತಿ ಮುಖ್ಯ. ‘ಶಿವರಾತ್ರಿ’ ಎಂಬ ಪದದಲ್ಲಿ ‘ರಾತ್ರಿ’ ಅಂದರೆ ಅಜ್ಞಾನ ಮತ್ತು ಅಂಧಕಾರ. ಇಂದಿನ ಸಮಾಜದಲ್ಲಿ ನೈತಿಕ, ಮಾನವೀಯ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಕುಸಿತವೇ ಧರ್ಮಗ್ಲಾನಿ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ಎಂದು ಹೇಳಿದರು.</p>.<p>ಉಪ ಎಂದರೆ ಹತ್ತಿರ, ವಾಸ ಎಂದರೆ ನೆಲೆಸು. ಮನಸ್ಸು ಮತ್ತು ಬುದ್ಧಿಯಿಂದ ಪರಮಾತ್ಮನ ಸಮೀಪದಲ್ಲಿರುವುದೇ ನಿಜವಾದ ಉಪವಾಸ ಎಂದರು.</p>.<p>ಪಾವನಧಾಮ ಕೇಂದ್ರದ ಸಂಚಾಲಕಿ ಬಿ.ಕೆ. ಪ್ರತಿಮಾ ಬಹೆನ್ಜೀ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಮಹಾ ಶಿವರಾತ್ರಿ ಪವಿತ್ರ ಸಂದರ್ಭದಲ್ಲಿ ವ್ಯಸನಮುಕ್ತ ಜೀವನ ನಡೆಸುವ ಸಂಕಲ್ಪ ಮಾಡಬೇಕು. ನಮ್ಮ ಕುಟುಂಬ, ಸಮಾಜ ಹಾಗೂ ದೇಶವನ್ನು ನಶೆಮುಕ್ತಗೊಳಿಸುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ತಿಳಿಸಿದರು.</p>.<p>ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ. ಗುರುದೇವಿ, ಬಿ.ಕೆ. ವಿಜಯಲಕ್ಷ್ಮೀ, ಬಿ.ಕೆ. ಜ್ಯೋತಿ, ಬಿ.ಕೆ. ಮಂಗಲಾ, ಶಿವಶರಣಪ್ಪ ವಾಲಿ ಹಾಜರಿದ್ದರು.</p>
<p><strong>ಬೀದರ್</strong>: ‘ಮನಸ್ಸು ಶಾಂತವಾದರೆ ನಿಜವಾದ ಸುಖ ಅನುಭವಿಸಲು ಸಾಧ್ಯ’ ಎಂದು ಪ್ರವಚನಕಾರ ರಾಜಯೋಗಿ ಭಾಯ್ ತಿಳಿಸಿದರು.</p>.<p>ನಗರದ ಜನವಾಡ ರಸ್ತೆಯ ಬ್ರಹ್ಮಕುಮಾರಿ ಪಾವನಧಾಮ ಕೇಂದ್ರದಲ್ಲಿ 90ನೇ ಮಹಾ ಶಿವರಾತ್ರಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಿವ ಧ್ವಜಾರೋಹಣ ಮಾಡಿ ಮಾತನಾಡಿದರು.</p>.<p>ಹೊರಗಿನ ಪರಿಸ್ಥಿತಿಗಳಿಗಿಂತ ಒಳಗಿನ ಶಾಂತಿ ಮುಖ್ಯ. ‘ಶಿವರಾತ್ರಿ’ ಎಂಬ ಪದದಲ್ಲಿ ‘ರಾತ್ರಿ’ ಅಂದರೆ ಅಜ್ಞಾನ ಮತ್ತು ಅಂಧಕಾರ. ಇಂದಿನ ಸಮಾಜದಲ್ಲಿ ನೈತಿಕ, ಮಾನವೀಯ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಕುಸಿತವೇ ಧರ್ಮಗ್ಲಾನಿ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ಎಂದು ಹೇಳಿದರು.</p>.<p>ಉಪ ಎಂದರೆ ಹತ್ತಿರ, ವಾಸ ಎಂದರೆ ನೆಲೆಸು. ಮನಸ್ಸು ಮತ್ತು ಬುದ್ಧಿಯಿಂದ ಪರಮಾತ್ಮನ ಸಮೀಪದಲ್ಲಿರುವುದೇ ನಿಜವಾದ ಉಪವಾಸ ಎಂದರು.</p>.<p>ಪಾವನಧಾಮ ಕೇಂದ್ರದ ಸಂಚಾಲಕಿ ಬಿ.ಕೆ. ಪ್ರತಿಮಾ ಬಹೆನ್ಜೀ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಮಹಾ ಶಿವರಾತ್ರಿ ಪವಿತ್ರ ಸಂದರ್ಭದಲ್ಲಿ ವ್ಯಸನಮುಕ್ತ ಜೀವನ ನಡೆಸುವ ಸಂಕಲ್ಪ ಮಾಡಬೇಕು. ನಮ್ಮ ಕುಟುಂಬ, ಸಮಾಜ ಹಾಗೂ ದೇಶವನ್ನು ನಶೆಮುಕ್ತಗೊಳಿಸುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ತಿಳಿಸಿದರು.</p>.<p>ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ. ಗುರುದೇವಿ, ಬಿ.ಕೆ. ವಿಜಯಲಕ್ಷ್ಮೀ, ಬಿ.ಕೆ. ಜ್ಯೋತಿ, ಬಿ.ಕೆ. ಮಂಗಲಾ, ಶಿವಶರಣಪ್ಪ ವಾಲಿ ಹಾಜರಿದ್ದರು.</p>