‘ಪೊರಕೆ, ಬ್ರಶ್, ವಾಕ್ಯುಮ್ ಮಷೀನ್, ಸ್ಪ್ರೇ, ಫಾಗಿಂಗ್ ಯಂತ್ರ ಮೊದಲಾದವುಗಳನ್ನು ಸ್ಯಾನಿಟೈಸೇಷನ್ಗೆ ಬಳಸುತ್ತಿದ್ದಾರೆ. ನೀರು ಇಲ್ಲದ ಪ್ರಾರ್ಥನಾ ಮಂದಿರಗಳಿಗೆ ಟ್ಯಾಂಕರ್ ಮೂಲಕ ನೀರು ಒಯ್ದು ಶುಚಿಗೊಳಿಸುತ್ತಿದ್ದಾರೆ’ ಎಂದು ತಿಳಿಸುತ್ತಾರೆ. ‘ಮೂರು ದಿನಗಳ ಅವಧಿಯಲ್ಲಿ ಜಾಮಾ ಮಸೀದಿ, ನಯಾ ಕಮಾನ್ ಮಸೀದಿ, ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್, ಪಾಂಡುರಂಗ ಮಂದಿರ, ಬಸವ ಮಂಟಪ, ಜನವಾಡ ರಸ್ತೆಯಲ್ಲಿ ಇರುವ ಅಂಬೇಡ್ಕರ್ ಭವನ ಸೇರಿ 70 ಪ್ರಾರ್ಥನಾ ಮಂದಿರಗಳನ್ನು ಸ್ಯಾನಿಟೈಸೇಷನ್ ಮಾಡಲಾಗಿದೆ’ ಎಂದು ಹೇಳುತ್ತಾರೆ.