ಬೀದರ್: ಹಿಂದೂ ಜಾಗರಣ ವೇದಿಕೆಯಿಂದ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಅಖಂಡ ಭಾರತ ಸಂಕಲ್ಪ -2022 ಅಂಗವಾಗಿ ಭಾನುವಾರ ರಾತ್ರಿ ನಗರದಲ್ಲಿ ಪಂಜಿನ ಮೆರವಣಿಗೆ ನಡೆಯಿತು.
ಪಂಜಿನ ಮೆರವಣಿಗೆಯು ನಗರದ ಸರಸ್ವತಿ ಶಾಲೆಯ ಆವರಣದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಕ್ತಾಯಗೊಂಡಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಣದೂರಿನ ಭಂತೆ ಜ್ಞಾನಸಾಗರ್ ಥೇರೊ ಸಾನಿಧ್ಯ, ಚೇಂಬರ್ ಆಫ್ ಕಾಮರ್ಸ್ನ ಉಪಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಸೈನಿಕ ಕೆ.ಕೆ. ಶಿವರಾಜ, ಪ್ರಜ್ಞಾ ಪ್ರವಾಹ ಸಂಯೋಜಕ ಶಿವಾನಂದ ದಾಡಗೆ, ಹಿಂದೂ ಜಾಗರಣ ವೇದಿಕೆಯ ಕಲಬುರಗಿ ವಿಭಾಗದ ಸಂಯೋಜಕ ಶಿವಶರಣಪ್ಪ ಪಾಟೀಲ ಪಾಲ್ಗೊಂಡಿದ್ದರು.