<p><strong>ಔರಾದ್:</strong> ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ತಾಲ್ಲೂಕಿನ ಹಿಪ್ಪಳಗಾಂವ್ ಗ್ರಾಮದ ರೈತ ಸಂತೋಷ ಪಾಟೀಲ ಅವರ ಬರಡು ಭೂಮಿಗೆ ಕಾಯಕಲ್ಪ ನೀಡಿದೆ. ಈಗ ಆ ಭೂಮಿ ಫಲವತ್ತಾಗಿದೆ. ಅವರು ಕಳೆದ ವರ್ಷ ₹2.5 ಲಕ್ಷ ನುಗ್ಗೆಕಾಯಿ, ₹50 ಸಾವಿರ ಮೌಲ್ಯದ ನುಗ್ಗೆ ಬೀಜ ಮಾರಾಟ ಮಾಡಿದ್ದಾರೆ.</p>.<p>ಸಂತೋಷ ಪಾಟೀಲ ಅವರು ಈ ಮೊದಲುಬಟ್ಟೆ ವ್ಯಾಪಾರ ಮಾಡಿ ನಷ್ಟ ಅನುಭ<br />ವಿಸಿದ್ದರು. ಬಳಿಕ ಅರಣ್ಯ ಇಲಾಖೆ ಸಹಕಾರದಿಂದ ಐದು ಎಕರೆ ಜಮೀನಿನಲ್ಲಿನ ಕಲ್ಲು, ಮುಳ್ಳು ತೆಗೆದು ಭೂಮಿಯನ್ನು ಹದ ಮಾಡಿದರು. ಇದರಲ್ಲಿ ನುಗ್ಗೆ, ಮಾವು, ನಿಂಬೆ ಹಾಗೂ ಸೀತಾಫಲ ಸೇರಿ ಒಟ್ಟು ಎರಡು ಸಾವಿರ ಸಸಿಗಳನ್ನು ನಾಟಿ ಮಾಡಿದ್ದಾರೆ.</p>.<p>ಹೊಲದ ಪಕ್ಕದಲ್ಲಿ ಹರಿದು ಹೋದ ಹಳ್ಳದ ಬಳಿ ಕೊಳವೆಬಾವಿ ಕೊರೆದು ಅದರ ನೀರು ಬಳಕೆ ಮಾಡಿಕೊಂಡಿದ್ದಾರೆ. ಹಣ ಖರ್ಚು ಮಾಡಿ ಇಡೀ ಐದು ಎಕರೆ ಹೊಲವನ್ನು ಹನಿ ನೀರಾವರಿ ಪದ್ಧತಿಗೆ ಒಳಪಡಿಸಿದ್ದಾರೆ.</p>.<p>ಎರಡು ವರ್ಷದ ಕಷ್ಟದ ಫಲವಾಗಿ ₹3 ಲಕ್ಷ ಆದಾಯ ಬಂದಿದೆ. ಮುಂದಿನ ವರ್ಷದಿಂದ ನಿಂಬೆ ಮತ್ತು ಸೀತಾಫಲ ಇಳುವರಿಯಿಂದ ಉತ್ತಮ ಆದಾಯ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಅವರು.</p>.<p>‘ವ್ಯಾಪಾರ ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಖುಷಿ ಕೊಟ್ಟಿದೆ. ಸಾಮಾಜಿಕ ಅರಣ್ಯ ವಿಭಾಗದವರು ಎರಡು ಸಾವಿರ ಸಸಿ ನೆಟ್ಟಿದ್ದಾರೆ. ಆ ಸಸಿಗಳೇ ನನಗೆ ಈಗ ಹಣ ಕೊಡುವ ಕಾಮಧೇನುಗಳಾಗಿವೆ’ ಎಂದು ರೈತ ಸಂತೋಷ ಪಾಟೀಲ<br />ಹೇಳುತ್ತಾರೆ.</p>.<p>‘ರೈತ ಸಂತೋಷ ಪಾಟೀಲ ನರೇಗಾ ಯೋಜನೆ ಲಾಭ ಪಡೆದುಕೊಂಡಿದ್ದಾರೆ. ಏನೂ ಬೆಳೆಯದ ಬರಡು ಭೂಮಿಯಲ್ಲಿ ಕೈತುಂಬ ಹಣ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ತಮ್ಮ ಇತರೆ ಆರು ಎಕರೆ ಜಮೀನಿನಲ್ಲಿ ₹10 ಲಕ್ಷ ಮೌಲ್ಯದ ಪಪ್ಪಾಯಿ, ಕಲ್ಲಂಗಡಿ ಮಾರಾಟ ಬೆಳೆದು ಯಶಸ್ವಿ ರೈತರು ಎನಿಸಿಕೊಂಡಿದ್ದಾರೆ’ ಎಂದು ಉಪ ವಲಯ ಅರಣ್ಯಾಧಿಕಾರಿ ರಾಜಶೇಖರ ರಾಮಪುರೆ ತಿಳಿಸಿದ್ದಾರೆ.</p>.<p>‘ನರೇಗಾ ಯೋಜನೆ ರೈತರಿಗೆ ಅನುಕೂಲಕರ. ಬರಡು ಭೂಮಿ ಇದ್ದ ರೈತರು ಶ್ರೀಗಂಧ, ಹೆಬ್ಬೇವು, ಮಾವು, ಸೀತಾಫಲ, ನಿಂಬೆ ಮತ್ತಿತರೆ ಗಿಡಗಳನ್ನು ಬೆಳೆದು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದು’ ಎಂದು ವಲಯ ಅರಣ್ಯಾಧಿಕಾರಿ ವೀರೇಶ ಕಲ್ಯಾಣಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್:</strong> ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ತಾಲ್ಲೂಕಿನ ಹಿಪ್ಪಳಗಾಂವ್ ಗ್ರಾಮದ ರೈತ ಸಂತೋಷ ಪಾಟೀಲ ಅವರ ಬರಡು ಭೂಮಿಗೆ ಕಾಯಕಲ್ಪ ನೀಡಿದೆ. ಈಗ ಆ ಭೂಮಿ ಫಲವತ್ತಾಗಿದೆ. ಅವರು ಕಳೆದ ವರ್ಷ ₹2.5 ಲಕ್ಷ ನುಗ್ಗೆಕಾಯಿ, ₹50 ಸಾವಿರ ಮೌಲ್ಯದ ನುಗ್ಗೆ ಬೀಜ ಮಾರಾಟ ಮಾಡಿದ್ದಾರೆ.</p>.<p>ಸಂತೋಷ ಪಾಟೀಲ ಅವರು ಈ ಮೊದಲುಬಟ್ಟೆ ವ್ಯಾಪಾರ ಮಾಡಿ ನಷ್ಟ ಅನುಭ<br />ವಿಸಿದ್ದರು. ಬಳಿಕ ಅರಣ್ಯ ಇಲಾಖೆ ಸಹಕಾರದಿಂದ ಐದು ಎಕರೆ ಜಮೀನಿನಲ್ಲಿನ ಕಲ್ಲು, ಮುಳ್ಳು ತೆಗೆದು ಭೂಮಿಯನ್ನು ಹದ ಮಾಡಿದರು. ಇದರಲ್ಲಿ ನುಗ್ಗೆ, ಮಾವು, ನಿಂಬೆ ಹಾಗೂ ಸೀತಾಫಲ ಸೇರಿ ಒಟ್ಟು ಎರಡು ಸಾವಿರ ಸಸಿಗಳನ್ನು ನಾಟಿ ಮಾಡಿದ್ದಾರೆ.</p>.<p>ಹೊಲದ ಪಕ್ಕದಲ್ಲಿ ಹರಿದು ಹೋದ ಹಳ್ಳದ ಬಳಿ ಕೊಳವೆಬಾವಿ ಕೊರೆದು ಅದರ ನೀರು ಬಳಕೆ ಮಾಡಿಕೊಂಡಿದ್ದಾರೆ. ಹಣ ಖರ್ಚು ಮಾಡಿ ಇಡೀ ಐದು ಎಕರೆ ಹೊಲವನ್ನು ಹನಿ ನೀರಾವರಿ ಪದ್ಧತಿಗೆ ಒಳಪಡಿಸಿದ್ದಾರೆ.</p>.<p>ಎರಡು ವರ್ಷದ ಕಷ್ಟದ ಫಲವಾಗಿ ₹3 ಲಕ್ಷ ಆದಾಯ ಬಂದಿದೆ. ಮುಂದಿನ ವರ್ಷದಿಂದ ನಿಂಬೆ ಮತ್ತು ಸೀತಾಫಲ ಇಳುವರಿಯಿಂದ ಉತ್ತಮ ಆದಾಯ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಅವರು.</p>.<p>‘ವ್ಯಾಪಾರ ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಖುಷಿ ಕೊಟ್ಟಿದೆ. ಸಾಮಾಜಿಕ ಅರಣ್ಯ ವಿಭಾಗದವರು ಎರಡು ಸಾವಿರ ಸಸಿ ನೆಟ್ಟಿದ್ದಾರೆ. ಆ ಸಸಿಗಳೇ ನನಗೆ ಈಗ ಹಣ ಕೊಡುವ ಕಾಮಧೇನುಗಳಾಗಿವೆ’ ಎಂದು ರೈತ ಸಂತೋಷ ಪಾಟೀಲ<br />ಹೇಳುತ್ತಾರೆ.</p>.<p>‘ರೈತ ಸಂತೋಷ ಪಾಟೀಲ ನರೇಗಾ ಯೋಜನೆ ಲಾಭ ಪಡೆದುಕೊಂಡಿದ್ದಾರೆ. ಏನೂ ಬೆಳೆಯದ ಬರಡು ಭೂಮಿಯಲ್ಲಿ ಕೈತುಂಬ ಹಣ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ತಮ್ಮ ಇತರೆ ಆರು ಎಕರೆ ಜಮೀನಿನಲ್ಲಿ ₹10 ಲಕ್ಷ ಮೌಲ್ಯದ ಪಪ್ಪಾಯಿ, ಕಲ್ಲಂಗಡಿ ಮಾರಾಟ ಬೆಳೆದು ಯಶಸ್ವಿ ರೈತರು ಎನಿಸಿಕೊಂಡಿದ್ದಾರೆ’ ಎಂದು ಉಪ ವಲಯ ಅರಣ್ಯಾಧಿಕಾರಿ ರಾಜಶೇಖರ ರಾಮಪುರೆ ತಿಳಿಸಿದ್ದಾರೆ.</p>.<p>‘ನರೇಗಾ ಯೋಜನೆ ರೈತರಿಗೆ ಅನುಕೂಲಕರ. ಬರಡು ಭೂಮಿ ಇದ್ದ ರೈತರು ಶ್ರೀಗಂಧ, ಹೆಬ್ಬೇವು, ಮಾವು, ಸೀತಾಫಲ, ನಿಂಬೆ ಮತ್ತಿತರೆ ಗಿಡಗಳನ್ನು ಬೆಳೆದು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದು’ ಎಂದು ವಲಯ ಅರಣ್ಯಾಧಿಕಾರಿ ವೀರೇಶ ಕಲ್ಯಾಣಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>