<p><strong>ಬೀದರ್</strong>: ‘ಬೀದರ್ ಜಿಲ್ಲೆ ಅನೇಕ ಸ್ಮಾರಕಗಳನ್ನು ಒಳಗೊಂಡಿರುವ ಸಾಮರಸ್ಯದ ನೆಲೆಬೀಡು’ ಎಂದು ಸಂಶೋಧಕ ಸಂತೋಷ್ ಹಾನಗಲ್ ತಿಳಿಸಿದರು.</p>.<p>ಪುಸ್ತಕ ಸಂತೆಯ ಅಂಗವಾಗಿ ನಗರದ ಸಾಯಿ ಶಾಲೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ‘ಬೀದರ್ ಜಿಲ್ಲೆಯ ಸ್ಮಾರಕಗಳು’ ಕುರಿತ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.</p>.<p>ಬಿದ್ರಿ ಕಲೆ, ಬೀದರ್ ಕೋಟೆ, ಗುರುದ್ವಾರ, ಕರೇಜ್, ಬಹಮನಿ ಕೋಟೆ, ಬರೀದ್ ಷಾಹಿ ಗೋರಿಗಳು, ನರಸಿಂಹ ಝರಣಿ ಸ್ವಾಮಿ ದೇವಸ್ಥಾನ ಸೇರಿದಂತೆ ಅನೇಕ ಕೋಟೆ ಕೊತ್ತಲಗಳು ಜಿಲ್ಲೆಯಲ್ಲಿವೆ. ಇವುಗಳ ಸಂರಕ್ಷಣೆ ಸರ್ಕಾರದ ಜೊತೆ ಜೊತೆಗೆ ಸಾರ್ವಜನಿಕರದ್ದು ಆಗಿದೆ ಎಂದು ಹೇಳಿದರು.</p>.<p>ಸ್ಮಾರಕಗಳು ನಮ್ಮ ಗತಕಾಲದ ವೈಭವದ ಪ್ರತೀಕ. ನಾಡಿಮಿಡಿತ ಕೂಡ ಎನ್ನಬಹುದು. ಸಾಂಸ್ಕೃತಿಕ, ಐತಿಹಾಸಿಕ ಸಾಕ್ಷ್ಯಗಳು ಹೌದು. ಹೀಗಾಗಿ ಈ ಜೀವಂತ ಪಳೆಯುಳಿಕೆಗಳನ್ನು ಸಂರಕ್ಷಿಸಿ, ಅವುಗಳ ಮಹತ್ವ ಸಾರುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.</p>.<p>ನಾವು ಗೊಂದಲದಲ್ಲಿ ಇತಿಹಾಸ ನೋಡುವಂತಹ ಸಂದರ್ಭದಲ್ಲಿದ್ದೇವೆ. ಅನುಭವ ಮಂಟಪ ಸ್ಮಾರಕವೋ ಅಥವಾ ಧಾರ್ಮಿಕ ಕೇಂದ್ರವೋ? ಸರ್ಕಾರ ಈ ಸ್ಥಳ ಸ್ಮಾರಕಗಳ ಪಟ್ಟಿಯಲ್ಲೇಕೆ ಸೇರಿಸಿಲ್ಲ ಎಂಬ ಪ್ರಶ್ನೆ ಮೂಡಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಕೊನೆಯ ಭಾಷಣದಲ್ಲಿ ಅನುಭವ ಮಂಟಪದ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಹೇಳಿದರು.</p>.<p>ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗ ಡೆಂಗಿ, ಸಾಮಾಜಿಕ ಕಾರ್ಯಕರ್ತ ವಾದಿರಾಜ್, ಶಿವಕುಮಾರ ಉಪ್ಪೆ, ರಾಜಕುಮಾರ ಅಲ್ಲೂರೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ‘ಬೀದರ್ ಜಿಲ್ಲೆ ಅನೇಕ ಸ್ಮಾರಕಗಳನ್ನು ಒಳಗೊಂಡಿರುವ ಸಾಮರಸ್ಯದ ನೆಲೆಬೀಡು’ ಎಂದು ಸಂಶೋಧಕ ಸಂತೋಷ್ ಹಾನಗಲ್ ತಿಳಿಸಿದರು.</p>.<p>ಪುಸ್ತಕ ಸಂತೆಯ ಅಂಗವಾಗಿ ನಗರದ ಸಾಯಿ ಶಾಲೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ‘ಬೀದರ್ ಜಿಲ್ಲೆಯ ಸ್ಮಾರಕಗಳು’ ಕುರಿತ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.</p>.<p>ಬಿದ್ರಿ ಕಲೆ, ಬೀದರ್ ಕೋಟೆ, ಗುರುದ್ವಾರ, ಕರೇಜ್, ಬಹಮನಿ ಕೋಟೆ, ಬರೀದ್ ಷಾಹಿ ಗೋರಿಗಳು, ನರಸಿಂಹ ಝರಣಿ ಸ್ವಾಮಿ ದೇವಸ್ಥಾನ ಸೇರಿದಂತೆ ಅನೇಕ ಕೋಟೆ ಕೊತ್ತಲಗಳು ಜಿಲ್ಲೆಯಲ್ಲಿವೆ. ಇವುಗಳ ಸಂರಕ್ಷಣೆ ಸರ್ಕಾರದ ಜೊತೆ ಜೊತೆಗೆ ಸಾರ್ವಜನಿಕರದ್ದು ಆಗಿದೆ ಎಂದು ಹೇಳಿದರು.</p>.<p>ಸ್ಮಾರಕಗಳು ನಮ್ಮ ಗತಕಾಲದ ವೈಭವದ ಪ್ರತೀಕ. ನಾಡಿಮಿಡಿತ ಕೂಡ ಎನ್ನಬಹುದು. ಸಾಂಸ್ಕೃತಿಕ, ಐತಿಹಾಸಿಕ ಸಾಕ್ಷ್ಯಗಳು ಹೌದು. ಹೀಗಾಗಿ ಈ ಜೀವಂತ ಪಳೆಯುಳಿಕೆಗಳನ್ನು ಸಂರಕ್ಷಿಸಿ, ಅವುಗಳ ಮಹತ್ವ ಸಾರುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.</p>.<p>ನಾವು ಗೊಂದಲದಲ್ಲಿ ಇತಿಹಾಸ ನೋಡುವಂತಹ ಸಂದರ್ಭದಲ್ಲಿದ್ದೇವೆ. ಅನುಭವ ಮಂಟಪ ಸ್ಮಾರಕವೋ ಅಥವಾ ಧಾರ್ಮಿಕ ಕೇಂದ್ರವೋ? ಸರ್ಕಾರ ಈ ಸ್ಥಳ ಸ್ಮಾರಕಗಳ ಪಟ್ಟಿಯಲ್ಲೇಕೆ ಸೇರಿಸಿಲ್ಲ ಎಂಬ ಪ್ರಶ್ನೆ ಮೂಡಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಕೊನೆಯ ಭಾಷಣದಲ್ಲಿ ಅನುಭವ ಮಂಟಪದ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಹೇಳಿದರು.</p>.<p>ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗ ಡೆಂಗಿ, ಸಾಮಾಜಿಕ ಕಾರ್ಯಕರ್ತ ವಾದಿರಾಜ್, ಶಿವಕುಮಾರ ಉಪ್ಪೆ, ರಾಜಕುಮಾರ ಅಲ್ಲೂರೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>