<p><strong>ಬೀದರ್</strong>: ನಗರದ ಮನ್ನಳ್ಳಿ ರಸ್ತೆಯ ಬಿವಿಬಿ ಕಾಲೇಜು ಎದುರಿನ ಗುಮ್ಮೆ ಕಾಲೊನಿಗೆ ಗುರುವಾರ (ಆ.28) ಮಹಾನಗರ ಪಾಲಿಕೆಯ ಪೌರಾಯುಕ್ತ ಶಿವರಾಜ ರಾಠೋಡ್ ಹಾಗೂ ಸಿಬ್ಬಂದಿ ಭೇಟಿ ಕೊಟ್ಟು ಪರಿಶೀಲಿಸಿದರು.</p><p>‘ಗುಮ್ಮೆ ಕಾಲೊನಿಗೆ ಹರಿದು ಬರುತ್ತಿದೆ ಶವಗಳ ಮೂಳೆ!’ ಶೀರ್ಷಿಕೆ ಅಡಿ ಆಗಸ್ಟ್ 21ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. </p><p>ಕಾಲೊನಿಗೆ ಮಾಲ್, ಹೋಟೆಲ್, ಕಲ್ಯಾಣ ಮಂಟಪದಿಂದ ಶೌಚಾಲಯದ ನೀರು ಹರಿದು ಬರುತ್ತಿದೆ. ಸ್ಮಶಾನ ಭೂಮಿಯಿಂದ ಮೂಳೆಗಳು ಹರಿದು ಬರುತ್ತಿದ್ದು, ಜನರ ನೆಮ್ಮದಿ ಕಂಗೆಟ್ಟಿ ಹೋಗಿದೆ. ಬಾವಿಗಳ ನೀರು ಕಲುಷಿತಗೊಂಡಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. </p><p>ವರದಿಗೆ ಎಚ್ಚೆತ್ತ ಮಹಾನಗರ ಪಾಲಿಕೆಯ ಪೌರಾಯುಕ್ತ ಶಿವರಾಜ ರಾಠೋಡ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ, ಶೀಘ್ರ ಪರಿಹಾರ ಒದಗಿಸುವ ಆಶ್ವಾಸನೆ ನೀಡಿದರು. </p><p>‘ಶೌಚಾಲಯದ ನೀರು ಹರಿಸುತ್ತಿದ್ದು, ಮಾಲ್ನವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಈಗ ನೀರು ಹರಿಸುತ್ತಿಲ್ಲ. ಯುಜಿಡಿಗೆ ಸಂಪರ್ಕ ಪಡೆದುಕೊಂಡಿದ್ದಾರೆ. ಇನ್ನು, ಸ್ಮಶಾನ ಭೂಮಿಯಲ್ಲಿ ತೋಡಲಾಗಿದ್ದ ಬೃಹತ್ ಗುಂಡಿಯನ್ನು ಮುಚ್ಚಲಾಗುತ್ತಿದೆ. ಕಾಲೊನಿಗೆ ನೀರು ಹರಿದು ಬರುತ್ತಿದ್ದ ಸ್ಥಳಗಳನ್ನು ಬಂದ್ ಮಾಡಲಾಗಿದೆ. ಪ್ರತಿ ಕಾಲೊನಿಯ ಅಭಿವೃದ್ಧಿಗೆ ₹40 ಲಕ್ಷ ಮೀಸಲಿಟ್ಟಿದ್ದು, ಅದರಡಿ ವ್ಯವಸ್ಥಿತವಾದ ಚರಂಡಿ ನಿರ್ಮಿಸಿ, ಶಾಶ್ವತವಾಗಿ ಪರಿಹಾರ ಒದಗಿಸಲಾಗುವುದು. ಮಳೆ ನಿಂತ ನಂತರ ಕೆಲಸ ಶುರುವಾಗಲಿದೆ’ ಎಂದು ಶಿವರಾಜ ರಾಠೋಡ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ನಗರದ ಮನ್ನಳ್ಳಿ ರಸ್ತೆಯ ಬಿವಿಬಿ ಕಾಲೇಜು ಎದುರಿನ ಗುಮ್ಮೆ ಕಾಲೊನಿಗೆ ಗುರುವಾರ (ಆ.28) ಮಹಾನಗರ ಪಾಲಿಕೆಯ ಪೌರಾಯುಕ್ತ ಶಿವರಾಜ ರಾಠೋಡ್ ಹಾಗೂ ಸಿಬ್ಬಂದಿ ಭೇಟಿ ಕೊಟ್ಟು ಪರಿಶೀಲಿಸಿದರು.</p><p>‘ಗುಮ್ಮೆ ಕಾಲೊನಿಗೆ ಹರಿದು ಬರುತ್ತಿದೆ ಶವಗಳ ಮೂಳೆ!’ ಶೀರ್ಷಿಕೆ ಅಡಿ ಆಗಸ್ಟ್ 21ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. </p><p>ಕಾಲೊನಿಗೆ ಮಾಲ್, ಹೋಟೆಲ್, ಕಲ್ಯಾಣ ಮಂಟಪದಿಂದ ಶೌಚಾಲಯದ ನೀರು ಹರಿದು ಬರುತ್ತಿದೆ. ಸ್ಮಶಾನ ಭೂಮಿಯಿಂದ ಮೂಳೆಗಳು ಹರಿದು ಬರುತ್ತಿದ್ದು, ಜನರ ನೆಮ್ಮದಿ ಕಂಗೆಟ್ಟಿ ಹೋಗಿದೆ. ಬಾವಿಗಳ ನೀರು ಕಲುಷಿತಗೊಂಡಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. </p><p>ವರದಿಗೆ ಎಚ್ಚೆತ್ತ ಮಹಾನಗರ ಪಾಲಿಕೆಯ ಪೌರಾಯುಕ್ತ ಶಿವರಾಜ ರಾಠೋಡ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ, ಶೀಘ್ರ ಪರಿಹಾರ ಒದಗಿಸುವ ಆಶ್ವಾಸನೆ ನೀಡಿದರು. </p><p>‘ಶೌಚಾಲಯದ ನೀರು ಹರಿಸುತ್ತಿದ್ದು, ಮಾಲ್ನವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಈಗ ನೀರು ಹರಿಸುತ್ತಿಲ್ಲ. ಯುಜಿಡಿಗೆ ಸಂಪರ್ಕ ಪಡೆದುಕೊಂಡಿದ್ದಾರೆ. ಇನ್ನು, ಸ್ಮಶಾನ ಭೂಮಿಯಲ್ಲಿ ತೋಡಲಾಗಿದ್ದ ಬೃಹತ್ ಗುಂಡಿಯನ್ನು ಮುಚ್ಚಲಾಗುತ್ತಿದೆ. ಕಾಲೊನಿಗೆ ನೀರು ಹರಿದು ಬರುತ್ತಿದ್ದ ಸ್ಥಳಗಳನ್ನು ಬಂದ್ ಮಾಡಲಾಗಿದೆ. ಪ್ರತಿ ಕಾಲೊನಿಯ ಅಭಿವೃದ್ಧಿಗೆ ₹40 ಲಕ್ಷ ಮೀಸಲಿಟ್ಟಿದ್ದು, ಅದರಡಿ ವ್ಯವಸ್ಥಿತವಾದ ಚರಂಡಿ ನಿರ್ಮಿಸಿ, ಶಾಶ್ವತವಾಗಿ ಪರಿಹಾರ ಒದಗಿಸಲಾಗುವುದು. ಮಳೆ ನಿಂತ ನಂತರ ಕೆಲಸ ಶುರುವಾಗಲಿದೆ’ ಎಂದು ಶಿವರಾಜ ರಾಠೋಡ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>