ಹುಮನಾಬಾದ್: ವಿದ್ಯಾರ್ಥಿಗಳು ಬುದ್ದ, ಬಸವ, ಅಂಬೇಡ್ಕರಂತಹ ವ್ಯಕ್ತಿಗಳ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಶಿಕ್ಷಣ ಪಡೆಯಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ವೈ.ಆರ್.ನಂದಿಹಳ್ಳಿ ಹೇಳಿದರು.
ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಗುರುವಾರ ಆಯೋಜಿಸಿದ್ದ ದ್ವಿತೀಯ ಪಿಯುಸಿ, ಮತ್ತು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶವನ್ನು ಮುನ್ನಡೆಸುವಂತಹ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದ್ದು, ಪೋಷಕರ ಆಸೆ ಮತ್ತು ನಿಮ್ಮ ಜೀವನದಲ್ಲಿ ಸಾಧನೆ ಮಾಡಬೇಕಾದರೆ ಗುಣಮಟ್ಟದ ಶಿಕ್ಷಣ ಕಲಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜು ವಸತಿ ನಿಲಯದ ಮೇಲ್ವಿಚಾರಕ ಗುಂಡಪ್ಪ ಕುಂದಾ, ಬಸವಕಲ್ಯಾಣ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಶಿವಕುಮಾರ ಬಿರಾದಾರ ಮಾತನಾಡಿದರು.
ಮೇಲ್ವಿಚಾರಕರಾದ ಪಪ್ಪು ಮೇತ್ರೆ, ಪುಷ್ಪಾ ದಾಂಡೆಕರ್, ಗೌತಮ ಚಿಂತಲಗೇರಾ, ಅಂಬಣ್ಣ , ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ರಾಹುಲ್ ರತ್ನಾಕರ್, ಮುಖಂಡ ಪ್ರಶಾಂತ ಜಾನವೀರ ಇದ್ದರು. ಪ್ರಕಾಶ ದೊಡ್ಡಮನಿ ನಿರೂಪಿಸಿದರು.