ಶಿವಾಜಿ ವಲ್ಲೆವಾಡೆ, ಶಿವಯ್ಯ, ಸಚಿನ್, ಗೋವಿಂದ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಇವರಿಂದ 17 ಬೈಕ್ ಜಪ್ತಿ ಮಾಡಿಕೊಂಡಿದ್ದಾರೆ. ಈ ನಾಲ್ವರು ಕಮಲನಗರ ತಾಲ್ಲೂಕಿನವರು ಎಂದು ಗೊತ್ತಾಗಿದೆ. ಕಳೆದ ಕೆಲ ತಿಂಗಳಿನಿಂದ ಇವರು ಔರಾದ್, ಭಾಲ್ಕಿ, ಬೀದರ್, ಉದಗೀರ್ ಪಟ್ಟಣಗಳಲ್ಲಿ ಬೈಕ್ ಕಳ್ಳತನ ಮಾಡಿದ್ದರು.