ವಿಲೀನ ಕಾರ್ಯಕ್ರಮ
ಬೀದರ್: ಭಾರತೀಯ ಭೀಮ ಸೇನೆಯಲ್ಲಿ ರಾಜ್ಯ ದಲಿತ ಏಕಿಕರಣ ಸಮಿತಿ ವಿಲೀನ ಕಾರ್ಯಕ್ರಮ ನಗರದ ಬಿ.ಶಾಮಸುಂದರ ಭವನದಲ್ಲಿ ಈಚೆಗೆ ನಡೆಯಿತು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿಠಲದಾಸ ಪ್ಯಾಗೆ ಕಾರ್ಯಕ್ರಮ ಉದ್ಘಾಟಿಸಿದರು. ಹೈಕೋರ್ಟ್ ವಕೀಲ ಸೈಯದ್ ತಲಾಹಾಶ್ಮಿ, ಸುಮಂತ ಕಟ್ಟಿಮನಿ, ಸೈಯದ್ ಸರ್ಫರಾಜ್ ಹಾಶ್ಮಿ, ಸುನೀಲಕುಮಾರ ಡೊಳ್ಳೆ, ಗಣಪತಿ ಭಕ್ತಾ ಮಾತನಾಡಿದರು.
ಸುರೇಶ ಶಿಂಧೆ, ಪಂಡರಿ ವರ್ಮಾ, ಮಹಾದೇವ ಕಾಂಬಳೆ, ಸುರೇಶ ಟಾಳೆ ಇದ್ದರು. ಬಕ್ಕಪ್ಪ ದಂಡಿನ್ ಸ್ವಾಗತಿಸಿದರು.
ಕಿಶೋರಕುಮಾರ ನವಲಸಪೂರಕರ್ ನಿರೂಪಿಸಿದರು.
* * *
ಬಿಜೆಪಿ ಕಾರ್ಯಕಾರಣಿ ಸಭೆ
ಬೀದರ್: ಬಿಜೆಪಿ ನಗರ ಘಟಕದ ಕಾರ್ಯಕಾರಣಿ ಸಭೆ ಪಕ್ಷದ ಕಾರ್ಯಾಲಯದಲ್ಲಿ ಈಚೆಗೆ ನಡೆಯಿತು.
ಹಿರಿಯ ಮುಖಂಡ ಈಶ್ವರಸಿಂಗ್ ಠಾಕೂರ್, ಎಸ್.ಟಿ ಮೋರ್ಚಾದ ಅಧ್ಯಕ್ಷ ಮಹೇಶ ಪಾಲಮ್ ಮಾತನಾಡಿದರು.
ಬೀದರ್ ನಗರ ಘಟಕದ ಅಧ್ಯಕ್ಷ ಹಣಮಂತರಾವ್ ಬುಳ್ಳಾ, ಎಸ್.ಟಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಜಕುಮಾರ ಜಮಾದಾರ್, ರವೀಂದ್ರ ಬಾಳೆಬಾಯಿ, ಅನಿಲ ರಾಜಗೀರಾ, ಸುನೀಲ ಗೌಳಿ, ಅವಿನಾಶ ಬರಿದಾಬಾದೆ, ಕಿಶನ್ ಜಮಾದಾರ ಪಾಲ್ಗೊಂಡಿದ್ದರು.
* * *