ಬೀದರ್: ನಗರದ ಬಸವನಗರ, ಚನ್ನಬಸವನಗರ ಮತ್ತು ಸಾಯಿನಗರದಲ್ಲಿ ಸಿಸಿ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಕಾಮಗಾರಿಗೆ ಚಾಲನೆ ನೀಡಿದ ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಮಾತನಾಡಿ,‘ವಿಧಾನ ಪರಿಷತ್ನ ₹ 10 ಲಕ್ಷ ಅನುದಾನದಲ್ಲಿ ವಾರ್ಡ್ ಸಂಖ್ಯೆ 22, 18ರ ಬಡಾವಣೆಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ’ ಎಂದು ಹೇಳಿದರು.
ಸ್ಥಳೀಯರ ಮನವಿ ಮೇರೆಗೆ ಕಾಮಗಾರಿ ಆರಂಭಿಸಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳುವ ಜತೆಗೆ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಸ್ಥಳೀಯರು ಕಾಮಗಾರಿ ಮೇಲೆ ನಿಗಾ ಇಡಬೇಕು ಎಂದು ತಿಳಿಸಿದರು.
ನಗರಸಭೆ ಸದಸ್ಯರಾದ ರಾಜಾರಾಮ ಚಿಟ್ಟಾ, ಶಶಿಧರ ಹೊಸಳ್ಳಿ, ಪ್ರಮುಖರಾದ ಸೊಮಶೇಖರ ಪಾಟೀಲ ಗಾದಗಿ, ರೇವಣಸಿದ್ದಪ್ಪ ಜಲಾದೆ, ವಿಜಯಕುಮಾರ ಪಾಟೀಲ ಗಾದಗಿ, ರಾಜೇಶ (ಪಪ್ಪು), ಸಂಗಮೇಶ ನಾಸಿಗಾರ್, ದತ್ತು ಪಟೇಲ, ಸುರೇಶ ಮಾಶೆಟ್ಟಿ, ವಿಕ್ರಮ ಮುದಾಳೆ, ವೀರೇಶ ಸ್ವಾಮಿ ಹಾಗೂ ಶಿವಕುಮಾರ ಪಾಟೀಲ ಇದ್ದರು.