ಗೋವುಗಳಿಗೆ ಪೂಜೆ ಸಲ್ಲಿಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಮಾತನಾಡಿ, ರಾಜ್ಯ ಸರ್ಕಾರ ಮಸೂದೆ ಮಂಡಿಸಿ ಅಂಗೀಕಾರಗೊಳಿಸಿರುವುದು ಸ್ವಾಗತಾರ್ಹ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ರೈತರು, ಕಾರ್ಮಿಕರು, ಬಡ ಜನತೆಯ ಪರವಾದ ಯೋಜನೆಗಳನ್ನು ರೂಪಿಸಿವೆ. ಗೋಹತ್ಯೆ ನಿಷೇಧ ಮಸೂದೆ ಗೋರಕ್ಷಕರಿಗೆ ಸಂತಸ ತಂದಿದೆ’ ಎಂದರು.