ಕೋಪ ಬರುವ ಸನ್ನಿವೇಶಗಳಿಂದ ಆದಷ್ಟು ದೂರ ಇರಬೇಕು. ಮನಸ್ಸನ್ನು ಆಧ್ಯಾತ್ಮ ಚಿಂತನೆಗಳ ಕಡೆ ತಿರುಗಿಸಬೇಕು. ಆತುರದ ಅವರಸರದ ನಿರ್ಧಾರ ತೆಗೆದುಕೊಳ್ಳಬಾರದು. ಭಕ್ತಿಗೀತೆ, ವಚನಗಳು ಹಾಡುತ್ತಿರಬೇಕು. ಸಂಗೀತಮಯದಿಂದ ಹಾಡಿದ ವಚನಗಳು ಕೇಳುತ್ತಿರಬೇಕು. ಮಹಾತ್ಮರ ಜೀವನ ಸಂದೇಶಗಳು ಮೆಲಕು ಹಾಕುತ್ತ ಇರಬೇಕು. ನಮ್ಮ ಸಿಟ್ಟು ನಿಯಂತ್ರಣಕ್ಕೆ ಬರುತ್ತದೆ. ಅಕ್ಕಮಹಾದೇವಿಯವರು ಹೇಳುತ್ತಾರೆ “ಈ ಲೋಕದಲ್ಲಿ ಹುಟ್ಟಿರ್ದಬಳಿಕ ಸ್ತುತಿ ನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು” ಸಮಾಧಾನ ನೆಮ್ಮದಿಯೇ ದೊಡ್ಡ ಸಂಪತ್ತು ಅದುವೇ ನಮ್ಮ ಆಸ್ತಿ. ಅದನ್ನು ಸಾಧಿಸಿದರೆ ಜೀವನದಲ್ಲಿ ಸದಾ ಆನಂದವಾಗಿರುತ್ತದೆ. ಅದುವೇ ನಿಜವಾದ ಸುಖ.