ಬಸವಕಲ್ಯಾಣ ತಾಲ್ಲೂಕಿನ ಬೇಟಬಾಲಕುಂದಾದ 48 ವರ್ಷದ ಪುರುಷ ಆಗಸ್ಟ್ 17 ರಂದು ಆಸ್ಪತ್ರೆಗೆ ದಾಖಲಾಗಿ, ಆಗಸ್ಟ್ 19ರಂದು ಕೊನೆಯುಸಿರೆಳೆದಿದ್ದರು. ರಾಜೇಶ್ವರದ 65 ವರ್ಷದ ಪುರುಷ ಅಧಿಕ ರಕ್ತದೊತ್ತಡದಿಂದಾಗಿ ಆಗಸ್ಟ್ 17 ರಂದು ಆಸ್ಪತ್ರೆಗೆ ದಾಖಲಾಗಿ, ಅದೇ ದಿನ ಮೃತಪಟ್ಟಿದ್ದರು.
ಮೃತ ಮೂವರ ಗಂಟಲು ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಬುಧವಾರ ವರದಿ ಪಾಸಿಟಿವ್ ಬಂದಿದೆ.