ಬೀದರ್: ಬೀದರ್–ಬೆಂಗಳೂರು ವಿಮಾನಯಾನ ಸೇವೆ ಪುನರಾರಂಭಿಸಬೇಕು ಎಂದು ಆಗ್ರಹಿಸಿ ಭಾರತ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಬೀದರ್–ಬೆಂಗಳೂರು ವಿಮಾನಯಾನವು ಯಶಸ್ವಿಯಾಗಿ ನಡೆದಿತ್ತು. 2023ರಲ್ಲಿ ವಿಮಾನಯಾನ ಸಂಸ್ಥೆಯೊಂದಿಗಿನ ಒಪ್ಪಂದ ಕೊನೆಗೊಂಡ ಹಿನ್ನೆಲೆಯಲ್ಲಿ ಸೇವೆ ನಿಂತಿದೆ. ಮರು ಒಪ್ಪಂದ ಮಾಡಿಕೊಂಡು ತಕ್ಷಣವೇ ವಿಮಾನ ಸೇವೆ ಶುರು ಮಾಡಬೇಕೆಂದು ಒತ್ತಾಯಿಸಿದರು. ಈ ಸಂಬಂಧ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಗೌಡಪನೋರ, ಪ್ರದೀಪ ಯನಗುಂದಾ, ಅರುಣ ಕೋಡಗೆ, ಶ್ರೀನಿವಾಸ ಮಲ್ಬಾ, ಬಸವರಾಜ ಪಾಟೀಲ ಇನ್ನಿತರರು ಹಾಜರಿದ್ದರು.