<p><strong>ಜನವಾಡ</strong>: ವಿದ್ಯಾನಿಕೇತನ ಹಾಗೂ ಅರಳು ಸಂಸ್ಥೆ ವತಿಯಿಂದ ಬೀದರ್ ತಾಲ್ಲೂಕಿನ 8 ಗ್ರಾಮಗಳ 160 ಮಂದಿ ಬಾಲ್ಯ ವಿವಾಹ ತಡೆ ಆಂದೋಲನ ನಾಯಕಿಯರಿಗೆ ಕೋವಿಡ್ ಸುರಕ್ಷತಾ ಸಾಮಗ್ರಿ ಕಿಟ್ ವಿತರಿಸಲಾಯಿತು.</p>.<p>ಹದಿಹರೆಯದ ಹೆಣ್ಣುಮಕ್ಕಳ ಸಬಲೀಕರಣ (ಇಮೇಜ್) ಯೋಜನೆ ಅಡಿಯಲ್ಲಿ ಎರಡೂ ಸಂಸ್ಥೆಗಳ ಪ್ರತಿನಿಧಿಗಳು ಕಾಶೆಂಪೂರ್ (ಪಿ), ಮರ್ಜಾಪುರ (ಎಂ), ಕಂಗನಕೋಟ, ನೆಲವಾಡ, ಕಮಠಾಣ, ಯದಲಾಪುರ, ಅಯಾಸಪುರ ಹಾಗೂ ಅಷ್ಟೂರ ಗ್ರಾಮಗಳಲ್ಲಿ ಸ್ಯಾನಿಟೈಸರ್ ಬಾಟಲಿ, ಮಾಸ್ಕ್, ಸಾಬೂನು, ಟವೆಲ್ಗಳನ್ನು ಒಳಗೊಂಡ ಕಿಟ್ ವಿತರಣೆ ಮಾಡಿದರು.</p>.<p>ಪ್ರತಿಯೊಬ್ಬರೂ ಕೋವಿಡ್ ಬಗ್ಗೆ ಎಚ್ಚರಿಕೆ ವಹಿಸಬೇಕು. ಸೋಂಕು ನಿರ್ಮೂಲನೆ ಆಗುವವರೆಗೂ ಸುರಕ್ಷತಾ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಇಮೇಜ್ ಯೋಜನೆ ಜಿಲ್ಲಾ ಸಂಚಾಲಕ ಡಾ. ಕೆ.ಟಿ. ಮೆರಿಲ್ ಹೇಳಿದರು.</p>.<p>ಕೋವಿಡ್ ಸೋಂಕು ತಡೆಗೆ ನೆರವಾಗುವುದು ಸುರಕ್ಷತಾ ಸಾಮಗ್ರಿಗಳ ಕಿಟ್ ವಿತರಣೆ ಉದ್ದೇಶವಾಗಿದೆ. ಕೋವಿಡ್ ಕಾರಣ ವಿಧಿಸಲಾದ ಲಾಕ್ಡೌನ್ನಿಂದ ಅನೇಕ ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆಗಳು ಕಂಡು ಬಂದಿದ್ದವು. ಹೀಗಾಗಿ ತಾಲ್ಲೂಕಿನ ವಿವಿಧ ಗ್ರಾಮಗಳ ಹಾಲುಣಿಸುವ ತಾಯಂದಿರು ಹಾಗೂ ಗರ್ಭಿಣಿಯರಿಗೆ ಈಗಾಗಲೇ ಪೌಷ್ಟಿಕ ಆಹಾರ ಕಿಟ್ ವಿತರಿಸಲಾಗಿದೆ. ಕೋವಿಡ್ ವಾರಿಯರ್ಗಳಾದ ಆಶಾ ಕಾರ್ಯಕರ್ತೆಯರಿಗೂ ಸುರಕ್ಷತಾ ಸಾಮಗ್ರಿಗಳ ಕಿಟ್ ವಿತರಿಸಲಾಗಿದೆ ಎಂದು ಹೇಳಿದರು.</p>.<p>ಸ್ವಯಂ ಸೇವಕರಾದ ಸುನಿತಾ, ಯೋಹಾನ್, ಬಾಲ್ಯವಿವಾಹ ತಡೆ ಆಂದೋಲನದ ನಾಯಕಿಯರಾದ ಲಕ್ಷ್ಮಿ ನೆಲವಾಡ, ಪ್ರಿಯಂಕಾ ಮರ್ಜಾಪುರ, ಎಸ್ತೇರ್ ಕಾಶೆಂಪೂರ್, ಶ್ರೀದೇವಿ ಕಂಗನಕೋಟ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜನವಾಡ</strong>: ವಿದ್ಯಾನಿಕೇತನ ಹಾಗೂ ಅರಳು ಸಂಸ್ಥೆ ವತಿಯಿಂದ ಬೀದರ್ ತಾಲ್ಲೂಕಿನ 8 ಗ್ರಾಮಗಳ 160 ಮಂದಿ ಬಾಲ್ಯ ವಿವಾಹ ತಡೆ ಆಂದೋಲನ ನಾಯಕಿಯರಿಗೆ ಕೋವಿಡ್ ಸುರಕ್ಷತಾ ಸಾಮಗ್ರಿ ಕಿಟ್ ವಿತರಿಸಲಾಯಿತು.</p>.<p>ಹದಿಹರೆಯದ ಹೆಣ್ಣುಮಕ್ಕಳ ಸಬಲೀಕರಣ (ಇಮೇಜ್) ಯೋಜನೆ ಅಡಿಯಲ್ಲಿ ಎರಡೂ ಸಂಸ್ಥೆಗಳ ಪ್ರತಿನಿಧಿಗಳು ಕಾಶೆಂಪೂರ್ (ಪಿ), ಮರ್ಜಾಪುರ (ಎಂ), ಕಂಗನಕೋಟ, ನೆಲವಾಡ, ಕಮಠಾಣ, ಯದಲಾಪುರ, ಅಯಾಸಪುರ ಹಾಗೂ ಅಷ್ಟೂರ ಗ್ರಾಮಗಳಲ್ಲಿ ಸ್ಯಾನಿಟೈಸರ್ ಬಾಟಲಿ, ಮಾಸ್ಕ್, ಸಾಬೂನು, ಟವೆಲ್ಗಳನ್ನು ಒಳಗೊಂಡ ಕಿಟ್ ವಿತರಣೆ ಮಾಡಿದರು.</p>.<p>ಪ್ರತಿಯೊಬ್ಬರೂ ಕೋವಿಡ್ ಬಗ್ಗೆ ಎಚ್ಚರಿಕೆ ವಹಿಸಬೇಕು. ಸೋಂಕು ನಿರ್ಮೂಲನೆ ಆಗುವವರೆಗೂ ಸುರಕ್ಷತಾ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಇಮೇಜ್ ಯೋಜನೆ ಜಿಲ್ಲಾ ಸಂಚಾಲಕ ಡಾ. ಕೆ.ಟಿ. ಮೆರಿಲ್ ಹೇಳಿದರು.</p>.<p>ಕೋವಿಡ್ ಸೋಂಕು ತಡೆಗೆ ನೆರವಾಗುವುದು ಸುರಕ್ಷತಾ ಸಾಮಗ್ರಿಗಳ ಕಿಟ್ ವಿತರಣೆ ಉದ್ದೇಶವಾಗಿದೆ. ಕೋವಿಡ್ ಕಾರಣ ವಿಧಿಸಲಾದ ಲಾಕ್ಡೌನ್ನಿಂದ ಅನೇಕ ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆಗಳು ಕಂಡು ಬಂದಿದ್ದವು. ಹೀಗಾಗಿ ತಾಲ್ಲೂಕಿನ ವಿವಿಧ ಗ್ರಾಮಗಳ ಹಾಲುಣಿಸುವ ತಾಯಂದಿರು ಹಾಗೂ ಗರ್ಭಿಣಿಯರಿಗೆ ಈಗಾಗಲೇ ಪೌಷ್ಟಿಕ ಆಹಾರ ಕಿಟ್ ವಿತರಿಸಲಾಗಿದೆ. ಕೋವಿಡ್ ವಾರಿಯರ್ಗಳಾದ ಆಶಾ ಕಾರ್ಯಕರ್ತೆಯರಿಗೂ ಸುರಕ್ಷತಾ ಸಾಮಗ್ರಿಗಳ ಕಿಟ್ ವಿತರಿಸಲಾಗಿದೆ ಎಂದು ಹೇಳಿದರು.</p>.<p>ಸ್ವಯಂ ಸೇವಕರಾದ ಸುನಿತಾ, ಯೋಹಾನ್, ಬಾಲ್ಯವಿವಾಹ ತಡೆ ಆಂದೋಲನದ ನಾಯಕಿಯರಾದ ಲಕ್ಷ್ಮಿ ನೆಲವಾಡ, ಪ್ರಿಯಂಕಾ ಮರ್ಜಾಪುರ, ಎಸ್ತೇರ್ ಕಾಶೆಂಪೂರ್, ಶ್ರೀದೇವಿ ಕಂಗನಕೋಟ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>