ಆದರೆ, ಗುರುವಾರ ಖೂಬಾ ಅವರನ್ನು ಕಾಣಲು ಶಾಸಕರು, ಟಿಕೆಟ್ ಆಕಾಂಕ್ಷಿಗಳಾಗಿದ್ದವರು, ಸ್ಥಳೀಯ ಪ್ರಮುಖ ಮುಖಂಡರು ಬರಲಿಲ್ಲ. ಔರಾದ್ನಲ್ಲಿ ಅಮರೇಶ್ವರ ದೇವಸ್ಥಾನಕ್ಕೆ ಖೂಬಾ ತೆರಳಿ ದೇವರ ದರ್ಶನ ಪಡೆದರು. ಸ್ಥಳೀಯ ಶಾಸಕ ಪ್ರಭು ಚವಾಣ್ ಅಲ್ಲಿಗೂ ಸುಳಿಯಲಿಲ್ಲ. ಅವರ ಆಪ್ತರನ್ನು ಸಂಪರ್ಕಿಸಿದಾಗ, ಕೆಲಸದ ನಿಮಿತ್ತ ಮುಂಬೈಗೆ ತೆರಳಿದ್ದಾರೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.