<p><strong>ಬೀದರ್</strong>: ಸೇವೆಗಿಂತ ಶ್ರೇಷ್ಠವಾದದ್ದು ಮತ್ತೊಂದಿಲ್ಲ. ಎಲ್ಲರೂ ಸೇವಾ ದೀಕ್ಷೆ ಪಡೆದು ಸಂಕಷ್ಟದಲ್ಲಿರುವವರ ನೆರವಿಗೆ ಬರಲು ಇದು ಅತ್ಯಂತ ಪ್ರಶಸ್ತ ಕಾಲವಾಗಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಹೇಳಿದರು.</p>.<p>ನಗರದ ಹೊಸ ಬಸ್ ನಿಲ್ದಾಣ ಎದುರಿನ ಸುಪ್ರಿಯಾ ಕಾಂಟಿನೆಂಟಲ್ ಸಭಾಂಗಣದಲ್ಲಿ ರೋಟರಿ ಕ್ಲಬ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ 2020-21ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕೊರೊನಾ ವೈರಾಣು ಸಮಾಜಕ್ಕೆ ನಾನಾ ತರಹದ ಸಮಸ್ಯೆ, ಸವಾಲು, ಸಂಕಷ್ಟಗಳನ್ನು ತಂದಿಟ್ಟಿದೆ. ಇದರೊಟ್ಟಿಗೆ ವಿಪತ್ತಿನ ಈ ಪರಿಸ್ಥಿತಿಯು ಪ್ರತಿಯೊಬ್ಬರಿಗೂ ಹಲವು ರೀತಿಯಲ್ಲಿ ಪಾಠವನ್ನು ಸಹ ಕಲಿಸಿದೆ. ಇಂದು ನಾವೆಲ್ಲ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.</p>.<p>ಕೊರೊನಾ ನಮ್ಮೆಲ್ಲರ ಜೀವನ ಶೈಲಿ, ಆಹಾರ ಶೈಲಿ, ಕಾರ್ಯಶೈಲಿ ಜತೆಗೆ ಆಚಾರ-ವಿಚಾರಗಳನ್ನು ಸಹ ಬದಲಿಸಿದೆ. ಯಾವ ಪರಿಸ್ಥಿತಿಗೆ ಹೇಗೆ ಒಗ್ಗಿಕೊಳ್ಳಬೇಕು ಎನ್ನುವ ಬಗ್ಗೆ ಕಲ್ಪನೆಗೂ ಮೀರಿದ ಪಾಠಗಳನ್ನು ಕಲಿಸಿದೆ. ಬರುವ ದಿನಗಳಲ್ಲಿನ ಯಾವುದೇ ಸವಾಲನ್ನು ಸಮರ್ಥವಾಗಿ ನಿಭಾಯಿಸಲು ನಾವೆಲ್ಲ ಬಹಳ ಗಟ್ಟಿಯಾಗಬೇಕಿದೆ ಎಂದು ಹೇಳಿದರು.</p>.<p>ಸಮಾಜದ ಉಳ್ಳವರು, ಎಲ್ಲ ರೀತಿಯಿಂದ ಉತ್ತಮ ಸ್ಥಿತಿಯಲ್ಲಿದ್ದವರು ಕಷ್ಟದಲ್ಲಿರುವ ಹಾಗೂ ತೀರ ಅಗತ್ಯವಿರುವವರ ನೆರವಿಗೆ ಕೈಚಾಚಬೇಕಿದೆ. ಇದು ಪ್ರಾರ್ಥನೆ ಮಾಡುವ ಸಮಯವಲ್ಲ, ಬದಲಾಗಿ ಸಹಾಯಹಸ್ತ ಚಾಚುವ ಸಂದರ್ಭವಿದೆ. ನೊಂದವರ ಸೇವೆ ಮಾಡುವವರಲ್ಲೇ ಪರಮಾತ್ಮ ಬಂದು ನೆಲೆಸಿರುತ್ತಾನೆ ಎಂದು ತಿಳಿಸಿದರು.</p>.<p>ರೋಟರಿಯಂತಹ ಜನಪರ, ಜೀವಪರ, ಸಮಾಜಪರ ಕಾಳಜಿಯುಳ್ಳ ಸಂಸ್ಥೆಗಳು ಹೆಚ್ಚು ಹೆಚ್ಚು ಹುಟ್ಟಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.</p>.<p>ಹಿರಿಯ ಪತ್ರಕರ್ತ ಸ.ದಾ. ಜೋಶಿ ಮಾತನಾಡಿ, ಕೇವಲ ಮೂವರಿಂದ ಶುರುವಾದ ರೋಟರಿ ಸಂಸ್ಥೆಯು ಇಂದು ಜಗತ್ತಿನ 200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. 10 ಲಕ್ಷಕ್ಕೂ ಹೆಚ್ಚು ಸಕ್ರಿಯ ಸದಸ್ಯರನ್ನು ಹೊಂದಿದೆ. ಭಾರತದಲ್ಲೇ 3 ಸಾವಿರಕ್ಕೂ ಹೆಚ್ಚು ರೋಟರಿ ಕ್ಲಬ್ಗಳು ಕೆಲಸ ಮಾಡುತ್ತಿವೆ. ಭಾರತವು ಪೆÇೀಲಿಯೊ ಮುಕ್ತವಾಗುವಲ್ಲಿ ರೋಟರಿ ಸಂಸ್ಥೆ ವಹಿಸಿರುವ ಪಾತ್ರ ಪ್ರಮುಖ ಮತ್ತು ಸ್ಮರಣೀಯವಾಗಿದೆ ಎಂದರು.</p>.<p>ರೋಟರಿ ಕ್ಲಬ್ ನೂತನ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ಬರುವ ಒಂದು ವರ್ಷದ ತಮ್ಮ ಅವಧಿಯಲ್ಲಿ ಕೈಗೊಳ್ಳಲು ಉz್ದÉೀಶಿಸಿರುವ ಕಾರ್ಯ ಯೋಜನೆಗಳನ್ನು ವಿವರಿಸಿದರು.</p>.<p>ಪ್ರಮುಖರಾದ ಅಮರನಾಥ ಡೊಳ್ಳಿ, ಬಸವಕುಮಾರ ಪಾಟೀಲ, ಮಂಜುಳಾ ಮೂಲಗೆ, ಜ್ಯೋತ್ಸ್ನಾ ದೇಶಮುಖ, ಪ್ರಕಾಶ ಟೊಣ್ಣೆ, ರವಿ ಮೂಲಗೆ, ಡಾ. ರಾಜಶೇಖರ ಪಾಟೀಲ, ಜಹೀರ್ ಅನ್ವರ್, ಸುಮೀತ್ ಸಿಂದೋಲ್ ಇದ್ದರು.<br />ಇದಕ್ಕೂ ಮುನ್ನ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆ ಆವರಣದಲ್ಲಿ ಕ್ಲಬ್ ವತಿಯಿಂದ ಸಸಿಗಳನ್ನು ನೆಡಲಾಯಿತು.</p>.<p class="Briefhead"><strong>ಅಧ್ಯಕ್ಷರಾಗಿ ಹಾವಶೆಟ್ಟಿ ಪಾಟೀಲ ಪದಗ್ರಹಣ</strong></p>.<p>ಬೀದರ್: ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಹಾವಶೆಟ್ಟಿ ಪಾಟೀಲ, ಕಾರ್ಯದರ್ಶಿಯಾಗಿ ರಂಜೀತ ಪಾಟೀಲ ಪದಗ್ರಹಣ ಮಾಡಿದರು. ಹಾವಶೆಟ್ಟಿ ಅವರು ಎರಡನೇ ಸಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.<br />ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆಯಾಗಿ ಭಾರತಿ ಚನ್ನಶೆಟ್ಟಿ, ಕಾರ್ಯದರ್ಶಿಯಾಗಿ ಸುನೈನಾ ಗುತ್ತಿ ಅಧಿಕಾರ ವಹಿಸಿಕೊಂಡರು. ನಾಗೇಂದ್ರ ನಿಟ್ಟೂರೆ, ಉಜ್ವಲಾ ಟೊಣ್ಣೆ ಅವರು ಪದಗ್ರಹಣ ಅಧಿಕಾರಿಯಾಗಿ ಪ್ರಕ್ರಿಯೆ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಸೇವೆಗಿಂತ ಶ್ರೇಷ್ಠವಾದದ್ದು ಮತ್ತೊಂದಿಲ್ಲ. ಎಲ್ಲರೂ ಸೇವಾ ದೀಕ್ಷೆ ಪಡೆದು ಸಂಕಷ್ಟದಲ್ಲಿರುವವರ ನೆರವಿಗೆ ಬರಲು ಇದು ಅತ್ಯಂತ ಪ್ರಶಸ್ತ ಕಾಲವಾಗಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಹೇಳಿದರು.</p>.<p>ನಗರದ ಹೊಸ ಬಸ್ ನಿಲ್ದಾಣ ಎದುರಿನ ಸುಪ್ರಿಯಾ ಕಾಂಟಿನೆಂಟಲ್ ಸಭಾಂಗಣದಲ್ಲಿ ರೋಟರಿ ಕ್ಲಬ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ 2020-21ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕೊರೊನಾ ವೈರಾಣು ಸಮಾಜಕ್ಕೆ ನಾನಾ ತರಹದ ಸಮಸ್ಯೆ, ಸವಾಲು, ಸಂಕಷ್ಟಗಳನ್ನು ತಂದಿಟ್ಟಿದೆ. ಇದರೊಟ್ಟಿಗೆ ವಿಪತ್ತಿನ ಈ ಪರಿಸ್ಥಿತಿಯು ಪ್ರತಿಯೊಬ್ಬರಿಗೂ ಹಲವು ರೀತಿಯಲ್ಲಿ ಪಾಠವನ್ನು ಸಹ ಕಲಿಸಿದೆ. ಇಂದು ನಾವೆಲ್ಲ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.</p>.<p>ಕೊರೊನಾ ನಮ್ಮೆಲ್ಲರ ಜೀವನ ಶೈಲಿ, ಆಹಾರ ಶೈಲಿ, ಕಾರ್ಯಶೈಲಿ ಜತೆಗೆ ಆಚಾರ-ವಿಚಾರಗಳನ್ನು ಸಹ ಬದಲಿಸಿದೆ. ಯಾವ ಪರಿಸ್ಥಿತಿಗೆ ಹೇಗೆ ಒಗ್ಗಿಕೊಳ್ಳಬೇಕು ಎನ್ನುವ ಬಗ್ಗೆ ಕಲ್ಪನೆಗೂ ಮೀರಿದ ಪಾಠಗಳನ್ನು ಕಲಿಸಿದೆ. ಬರುವ ದಿನಗಳಲ್ಲಿನ ಯಾವುದೇ ಸವಾಲನ್ನು ಸಮರ್ಥವಾಗಿ ನಿಭಾಯಿಸಲು ನಾವೆಲ್ಲ ಬಹಳ ಗಟ್ಟಿಯಾಗಬೇಕಿದೆ ಎಂದು ಹೇಳಿದರು.</p>.<p>ಸಮಾಜದ ಉಳ್ಳವರು, ಎಲ್ಲ ರೀತಿಯಿಂದ ಉತ್ತಮ ಸ್ಥಿತಿಯಲ್ಲಿದ್ದವರು ಕಷ್ಟದಲ್ಲಿರುವ ಹಾಗೂ ತೀರ ಅಗತ್ಯವಿರುವವರ ನೆರವಿಗೆ ಕೈಚಾಚಬೇಕಿದೆ. ಇದು ಪ್ರಾರ್ಥನೆ ಮಾಡುವ ಸಮಯವಲ್ಲ, ಬದಲಾಗಿ ಸಹಾಯಹಸ್ತ ಚಾಚುವ ಸಂದರ್ಭವಿದೆ. ನೊಂದವರ ಸೇವೆ ಮಾಡುವವರಲ್ಲೇ ಪರಮಾತ್ಮ ಬಂದು ನೆಲೆಸಿರುತ್ತಾನೆ ಎಂದು ತಿಳಿಸಿದರು.</p>.<p>ರೋಟರಿಯಂತಹ ಜನಪರ, ಜೀವಪರ, ಸಮಾಜಪರ ಕಾಳಜಿಯುಳ್ಳ ಸಂಸ್ಥೆಗಳು ಹೆಚ್ಚು ಹೆಚ್ಚು ಹುಟ್ಟಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.</p>.<p>ಹಿರಿಯ ಪತ್ರಕರ್ತ ಸ.ದಾ. ಜೋಶಿ ಮಾತನಾಡಿ, ಕೇವಲ ಮೂವರಿಂದ ಶುರುವಾದ ರೋಟರಿ ಸಂಸ್ಥೆಯು ಇಂದು ಜಗತ್ತಿನ 200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. 10 ಲಕ್ಷಕ್ಕೂ ಹೆಚ್ಚು ಸಕ್ರಿಯ ಸದಸ್ಯರನ್ನು ಹೊಂದಿದೆ. ಭಾರತದಲ್ಲೇ 3 ಸಾವಿರಕ್ಕೂ ಹೆಚ್ಚು ರೋಟರಿ ಕ್ಲಬ್ಗಳು ಕೆಲಸ ಮಾಡುತ್ತಿವೆ. ಭಾರತವು ಪೆÇೀಲಿಯೊ ಮುಕ್ತವಾಗುವಲ್ಲಿ ರೋಟರಿ ಸಂಸ್ಥೆ ವಹಿಸಿರುವ ಪಾತ್ರ ಪ್ರಮುಖ ಮತ್ತು ಸ್ಮರಣೀಯವಾಗಿದೆ ಎಂದರು.</p>.<p>ರೋಟರಿ ಕ್ಲಬ್ ನೂತನ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ಬರುವ ಒಂದು ವರ್ಷದ ತಮ್ಮ ಅವಧಿಯಲ್ಲಿ ಕೈಗೊಳ್ಳಲು ಉz್ದÉೀಶಿಸಿರುವ ಕಾರ್ಯ ಯೋಜನೆಗಳನ್ನು ವಿವರಿಸಿದರು.</p>.<p>ಪ್ರಮುಖರಾದ ಅಮರನಾಥ ಡೊಳ್ಳಿ, ಬಸವಕುಮಾರ ಪಾಟೀಲ, ಮಂಜುಳಾ ಮೂಲಗೆ, ಜ್ಯೋತ್ಸ್ನಾ ದೇಶಮುಖ, ಪ್ರಕಾಶ ಟೊಣ್ಣೆ, ರವಿ ಮೂಲಗೆ, ಡಾ. ರಾಜಶೇಖರ ಪಾಟೀಲ, ಜಹೀರ್ ಅನ್ವರ್, ಸುಮೀತ್ ಸಿಂದೋಲ್ ಇದ್ದರು.<br />ಇದಕ್ಕೂ ಮುನ್ನ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆ ಆವರಣದಲ್ಲಿ ಕ್ಲಬ್ ವತಿಯಿಂದ ಸಸಿಗಳನ್ನು ನೆಡಲಾಯಿತು.</p>.<p class="Briefhead"><strong>ಅಧ್ಯಕ್ಷರಾಗಿ ಹಾವಶೆಟ್ಟಿ ಪಾಟೀಲ ಪದಗ್ರಹಣ</strong></p>.<p>ಬೀದರ್: ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಹಾವಶೆಟ್ಟಿ ಪಾಟೀಲ, ಕಾರ್ಯದರ್ಶಿಯಾಗಿ ರಂಜೀತ ಪಾಟೀಲ ಪದಗ್ರಹಣ ಮಾಡಿದರು. ಹಾವಶೆಟ್ಟಿ ಅವರು ಎರಡನೇ ಸಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.<br />ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆಯಾಗಿ ಭಾರತಿ ಚನ್ನಶೆಟ್ಟಿ, ಕಾರ್ಯದರ್ಶಿಯಾಗಿ ಸುನೈನಾ ಗುತ್ತಿ ಅಧಿಕಾರ ವಹಿಸಿಕೊಂಡರು. ನಾಗೇಂದ್ರ ನಿಟ್ಟೂರೆ, ಉಜ್ವಲಾ ಟೊಣ್ಣೆ ಅವರು ಪದಗ್ರಹಣ ಅಧಿಕಾರಿಯಾಗಿ ಪ್ರಕ್ರಿಯೆ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>