‘ತಾಲ್ಲೂಕಿನ ದುಬಲಗುಂಡಿ ಮತ್ತು ಡಾಕುಳಗಿಯ ಇಬ್ಬರಿಗೆ ಕೋವಿಡ್ ದೃಢಪಟ್ಟಿತ್ತು. ಅವರಿಗೆ ಆಸ್ಪತ್ರೆ ಹಾಸಿಗೆ ಲಭ್ಯತೆ ಬಗ್ಗೆ ತಿಳಿದುಕೊಳ್ಳಲು ತಾಲ್ಲೂಕು ಆರೋಗ್ಯ ಅಧಿಕಾರಿಗೆ ಎರಡು ಬಾರಿ ದೂರವಾಣಿ ಕರೆ ಮಾಡಿ್ದರೂ ಕರೆ ಸ್ವೀಕರಿಸಲಿಲ್ಲ. ಹಾಗಾಗಿ, ಈಚೆಗೆ ನಡೆದ ತಾ.ಪಂ ಕೊನೆಯ ಸಭೆಯಲ್ಲಿ ಅವರಿಗೆ ನನ್ನ ಕರೆ ಏಕೆ ಸ್ವೀಕರಿಸಿಲ್ಲ ಎಂದು ಪ್ರಶ್ನೆ ಮಾಡಿದರೆ, ಅವರು ಏಕವಚನದಲ್ಲಿ ನಿನ್ನ ಕರೆ ನಾನು ಏಕೆ ಸ್ವೀಕರಿಸಲಿ? ಎಂದರು. ಅದಕ್ಕಾಗಿ ನಾನು ಸ್ವಲ್ಪ ಆಕ್ರೋಶ ಭರಿತನಾಗಿ ನಮಗೆ ಮತ್ಯಾರು ಮಾಹಿತಿ ಕೊಡಬೇಕಪ್ಪ ಎಂದು ಕೇಳಿದಕ್ಕೆ ಅವರು ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ’ ಎಂದರು.