ಮಠದ ಮುಂಭಾದಲ್ಲಿ ಅಂಚೆ ಕಚೇರಿಯ ನೀವೆಶನ ಖಾಲಿ ಇದೆ. ಮಹಾಜನ ಗಲ್ಲಿ, ಪೊಲೀಸ್ ಕ್ವಾಟ್ರಸ್, ಡಿಸಿಸಿ ಬ್ಯಾಂಕ್, ಕಮಲನಗರ ಪ್ರವಾಸಿ ಮಂದಿರ, ಹೀಗೆ ಹಲವಾರು ಕಡೆಗಳಿಂದ ಹರಿದು ಬರುವ ನಾಲೆಗಳ ನೀರು ಅಂಚೆ ಕಚೇರಿಯ ನೀವೆಶನದಲ್ಲಿ ಕಶ್ಮಲಗೊಂಡ ನೀರು ಸುಮಾರು ವರ್ಷಗಳಿಂದ ನಿಂತು ಕೆಟ್ಟವಾಸನೆ ಬರುತಿದೆ. ಇದರಿಂದ ಸಾರ್ವಜನಿಕರು ತೀವ್ರ ಮುಜಗರಕ್ಕೊಳಗಾಗುತ್ತಿದ್ದಾರೆ. ಅಂಚೆ ಕಚೇರಿಯ ನೀವೆಶನದಲ್ಲಿ ಬಹಳ ದಿನಗಳಿಂದ ಹೊಲಸು ನೀರು ಜಮೆಯಾಗುವುರಿಂದ ಸಂಜೆಯಾಗುತ್ತಲೇ ಸೊಳ್ಳೆಗಳ ಕಾಟ ವಿಪರೀತವಾಗುತ್ತಿದೆ.