ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ರಕ್ಷಣೆ ಎಲ್ಲರ ಹೊಣೆ: ಗುಂಡಪ್ಪ ಹುಡಗೆ

Last Updated 7 ಏಪ್ರಿಲ್ 2021, 4:52 IST
ಅಕ್ಷರ ಗಾತ್ರ

ಚಿಟಗುಪ್ಪ: ‘ಎಲ್ಲ ಜೀವರಾಶಿಗಳ ಉಳಿವಿಗೆ ಸುತ್ತಲಿನ ಗಿಡ, ಮರ, ಗಾಳಿ, ನೀರು ಒಳಗೊಂಡ ಪರಿಸರ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲ ನಾಗರಿಕರ ಮೇಲೆ ಇದೆ’ ಎಂದು ವಿಜ್ಞಾನ ಪರಿವೀಕ್ಷಕ ಗುಂಡಪ್ಪ ಹುಡಗೆ ಹೇಳಿದರು.

ತಾಲ್ಲೂಕಿನ ಬೆಳಕೇರಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆ (ಇಕೊಕ್ಲಬ್) ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಸದಸ್ಯ ಮಹಾರುದ್ರಪ್ಪ ಅಣದೂರ ಮಾತನಾಡಿ, ‘ಪರಿಸರದ ನಾಶ ಮತ್ತು ಕಲ್ಮಷಕ್ಕೆ ಮಾನವ ಕಾರಣವಾಗಿದ್ದು, ಇದರ ಸಂರಕ್ಷಣೆಗೂ ಮಾನವ ಕಾರಣವಾಗಬೇಕು’ ಎಂದು ಹೇಳಿದರು.

ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು.

ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಗೆ ಅಗ್ರಶ್ರೇಣಿ ಪಡೆದ ವಿದ್ಯಾರ್ಥಿಗಳಾದ ಉಮಾದೇವಿ, ನಾಗವೇಣಿ ಅವರಿಗೆ ಬೇಳಕೇರಾದ ಚಂದ್ರಕಾಂತ ಕೊರಿ ವೈಯಕ್ತಿಕವಾಗಿ ಸನ್ಮಾನಿಸಿ ಕಾಣಿಕೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಸಂಗ್ರಾಮಪ್ಪಾ ಬುಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಪ್ಪ, ಗಣ್ಯರಾದ ವಿಕ್ಟರ್‌, ಲತಾ, ದಿಲೀಪಕುಮಾರ ಇದ್ದರು. ಮುಖ್ಯಗುರು ಅಂಬ್ಲೆ ಬಾಬುರಾವ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಸುನಂದಾ ಪ್ರಾಸ್ತಾವಿಕ ಮಾತನಾಡಿದರು. ಅನಿಲ ಕುಮಾರ ಸಿರಮುಂಡಿ ನಿರೂಪಿ ಸಿದರು. ಶ್ರೀನಾಥ ಸ್ವಾಗತಿಸಿದರು. ನಿಂಗಪ್ಪ ದೊಡ್ಡಮನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT