<p><strong>ಹುಲಸೂರ:</strong> ಸಮೀಪದ ಮೆಹಕರ ಗ್ರಾಮದಲ್ಲಿ ಕೃಷಿ ಸಾಲದ ಒತ್ತಡದಿಂದ ಮನನೊಂದ ರೈತರೊಬ್ಬರು ವಿಷ ಸೇವಿಸಿ ಮೃತಟ್ಟಿದ್ದಾರೆ. </p>.<p>ವಿಷ್ಣುಕಾಂತ ಮಧುಕರ ಹಿಲಾಪೂರೆ (40) ಮೃತರು. ಇವರು ಮೇಹಕರ ಶಿವಾರದಲ್ಲಿರುವ ಕುಟುಂಬದ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು.</p>.<p>ವಿವಿಧ ಬ್ಯಾಂಕ್ಗಳು ಮತ್ತು ಖಾಸಗಿ ಸಂಘಗಳಿಂದ ಪಡೆದಿದ್ದ ಕೃಷಿ ಸಾಲ ತೀರಿಸಲಾಗುತ್ತಿರಲಿಲ್ಲ. ಬಡ್ಡಿಯೂ ಹೆಚ್ಚಾಗುತ್ತಿತ್ತು. ಬೆಳೆ ಸಹ ಸರಿಯಾಗಿ ಬಾರದ ಕಾರಣ ಸಾಲದ ಒತ್ತಡ ಹೆಚ್ಚಾಗಿ ಮನನೊಂದು ಆತಂಕ ವ್ಯಕ್ತಪಡಿಸುತ್ತಿದ್ದರು ಎಂದು ಕುಂಟುಂಬದವರು ತಿಳಿಸಿದ್ದಾರೆ. </p>.<p>ಫೆಬ್ರವರಿ 28ರಂದು ಬೆಳಿಗ್ಗೆ ಹೊಲಕ್ಕೆ ತೆರಳಿದ್ದ ಅವರು ಸಂಜೆ ವೇಳೆಗೆ ಹೊಲದಲ್ಲಿದ್ದ ಶೆಡ್ನಲ್ಲಿ ಕೀಟನಾಶಕ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು. ತಕ್ಷಣ ಅವರನ್ನು ಹುಲಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಬೀದರ್ನ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮಾ.3ರಂದು ಮುಂಜಾನೆ ಮೃತಪಟ್ಟಿದ್ದಾರೆ.</p>.<p>ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಮೇಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಸೂರ:</strong> ಸಮೀಪದ ಮೆಹಕರ ಗ್ರಾಮದಲ್ಲಿ ಕೃಷಿ ಸಾಲದ ಒತ್ತಡದಿಂದ ಮನನೊಂದ ರೈತರೊಬ್ಬರು ವಿಷ ಸೇವಿಸಿ ಮೃತಟ್ಟಿದ್ದಾರೆ. </p>.<p>ವಿಷ್ಣುಕಾಂತ ಮಧುಕರ ಹಿಲಾಪೂರೆ (40) ಮೃತರು. ಇವರು ಮೇಹಕರ ಶಿವಾರದಲ್ಲಿರುವ ಕುಟುಂಬದ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು.</p>.<p>ವಿವಿಧ ಬ್ಯಾಂಕ್ಗಳು ಮತ್ತು ಖಾಸಗಿ ಸಂಘಗಳಿಂದ ಪಡೆದಿದ್ದ ಕೃಷಿ ಸಾಲ ತೀರಿಸಲಾಗುತ್ತಿರಲಿಲ್ಲ. ಬಡ್ಡಿಯೂ ಹೆಚ್ಚಾಗುತ್ತಿತ್ತು. ಬೆಳೆ ಸಹ ಸರಿಯಾಗಿ ಬಾರದ ಕಾರಣ ಸಾಲದ ಒತ್ತಡ ಹೆಚ್ಚಾಗಿ ಮನನೊಂದು ಆತಂಕ ವ್ಯಕ್ತಪಡಿಸುತ್ತಿದ್ದರು ಎಂದು ಕುಂಟುಂಬದವರು ತಿಳಿಸಿದ್ದಾರೆ. </p>.<p>ಫೆಬ್ರವರಿ 28ರಂದು ಬೆಳಿಗ್ಗೆ ಹೊಲಕ್ಕೆ ತೆರಳಿದ್ದ ಅವರು ಸಂಜೆ ವೇಳೆಗೆ ಹೊಲದಲ್ಲಿದ್ದ ಶೆಡ್ನಲ್ಲಿ ಕೀಟನಾಶಕ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು. ತಕ್ಷಣ ಅವರನ್ನು ಹುಲಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಬೀದರ್ನ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮಾ.3ರಂದು ಮುಂಜಾನೆ ಮೃತಪಟ್ಟಿದ್ದಾರೆ.</p>.<p>ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಮೇಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>