ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐನಿಂದ ಪ್ರತಿಭಾವಂತರಿಗೆ ಸನ್ಮಾನ

Last Updated 18 ಆಗಸ್ಟ್ 2022, 5:42 IST
ಅಕ್ಷರ ಗಾತ್ರ

ಔರಾದ್: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ತಾಲ್ಲೂಕಿನ ಸಂತಪುರದ ಎಸ್‍ಬಿಐ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಂತಪುರದ ಸಿದ್ಧರಾಮೇಶ್ವರ ಕಾಲೇಜಿನ ಅಮರ ಉಮಾಕಾಂತ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅಗ್ರಶ್ರೇಣಿ ಸಾಧನೆ ಮಾಡಿದ ಸಂತಪುರದ ಸುಭಾಷಚಂದ್ರ ಬೋಸ್ ಪ್ರೌಢ ಶಾಲೆಯ ಅರವಿಂದ, ಜ್ಞಾನ ಭಾರತಿ ಶಾಲೆಯ ದರ್ಶನ ಮಲ್ಲಯ್ಯ ಸ್ವಾಮಿ ಅವರನ್ನು ಗೌರವಿಸಲಾಯಿತು.ಶಾಖಾ ವ್ಯವಸ್ಥಾಪಕ ರಮೇಶ ಸಿಂಧೆ ಮಾತನಾಡಿ,‘ಸಾರ್ವಜನಿಕ ವಲಯದ ಎಸ್‍ಬಿಐ ಬ್ಯಾಂಕ್ ಜನರಿಗೆ ಆರ್ಥಿಕ ನೆರವಿನ ಜೊತೆಗೆ ಸಮಾಜ ಕಾರ್ಯದಲ್ಲೂ ಕೆಲಸ ಮಾಡುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯವೂ ನೀಡುತ್ತಿದೆ’ ಎಂದರು.ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಸ್ವಾಮಿ, ಓಂಪ್ರಕಾಶ, ಸಿದ್ದಣ್ಣ ಬ್ಯಾಳೆ, ವಿಠಲರಾವ ನಾಗರೂ, ಶರಣಪ್ಪ ಬಿರಾದಾರ, ನಿವೃತ್ತ ಸೈನಿಕ ಬಾಪುರಾವ ಪಾಟೀಲ, ರಮೇಶ ಹಾವಶೆಟ್ಟಿ, ಶಿವಾಜಿ ಬೋರಾಳ, ಗಂಗಶೆಟ್ಟಿ ಬಿರಾದಾರ, ಸಂತೋಷಕುಮಾರ, ನಾಸೀರ್, ಮಂಜುನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT