ಸದ್ಯ ಮಾವಿನ ಕಾಯಿ ಸಂಪೂರ್ಣವಾಗಿ ಹಣ್ಣಾಗುವ ಹಂತಕ್ಕೆ ತಲುಪಿತ್ತು. ಮುಂದಿನ ಹದಿನೈದು ದಿನಗಳಲ್ಲಿ ಮಾವು ತೆಗೆದು ಮಾರಾಟ ಮಾಡುತ್ತಿದ್ದೆ. ಇದರಿಂದ ಕೈ ತುಂಬಾ ಆದಾಯ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿ ಇದ್ದೆ. ಆದರೆ ಈ ಘಟನೆ ಸಂಭವಿಸಿರುವುದರಿಂದ ನನ್ನ ಆಸೆಯ ಮೇಲೆ ತಣ್ಣೀರು ಎರಚಿದಂತಾಗಿದೆ ಎಂದು ರೈತ ಮಲ್ಲಾರಿ ಅಳಲು ತೋಡಿಕೊಂಡರು.