ಮಳಿಗೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳದ ಉಸ್ಮಾನಗಂಜ್ ಇಕ್ಬಾಲ್ ಆ್ಯಂಡ್ ಕಂಪನಿ ಫ್ರುಟ್ಸ್ ಮರ್ಚಂಟ್ ಮಾಲೀಕನಿಗೆ ₹ 1 ಸಾವಿರ ದಂಡ ವಿಧಿಸಿದರು. ಜಮೀರ್ ಅಹ್ಮದ್ ಆ್ಯಂಡ್ ಸನ್ಸ್ ಫ್ರುಟ್ಸ್ ಮರ್ಚಂಟ್ಸ್, ಮುಜಾಮಿಲ್ ಆ್ಯಂಡ್ ಸನ್ಸ್, ನ್ಯೂ ಕರ್ನಾಟಕ ಫ್ರುಟ್ಸ್ ಮರ್ಚಂಟ್ಸ್, ಮೈನೋದ್ದಿನ್ ಫ್ರುಟ್ಸ್ ಕಂಪನಿ, ಎಫ್.ಝಡ್ ಫ್ರುಟ್ಸ್ ಕಂಪನಿ, ರಾಯಲ್ ಫ್ರುಟ್ಸ್ ಕಂಪನಿ, ಎಎಫ್ಸಿ ಫ್ರುಟ್ಸ್ ಕಂಪನಿ ಮಳಿಗೆಗಳ ಮೇಲೆ ದಾಳಿ ನಡೆಸಿ ಮಳಿಗೆಯಲ್ಲಿ ಕಾಯಿಗಳನ್ನು ಹಣ್ಣು ಮಾಡಲು ಉಪಯೋಗಿಸುವ ದ್ರಾವಣಗಳನ್ನು ಪರಿಶೀಲಿಸಿದರು. ಕಾಯಿಗಳನ್ನು ಹಣ್ಣು ಮಾಡಲು ಹಾನಿಕಾರಕ ರಾಸಾಯನಿಕ ದ್ರಾವಣಗಳನ್ನು ಬಳಸದಂತೆ ಎಚ್ಚರಿಕೆಯನ್ನೂ ನೀಡಿದರು.