ಸುಮಾರು 5 ವರ್ಷಗಳಿಂದ ಉಪಾಹಾರ ಗೃಹ ನಡೆಸುತ್ತಿದ್ದೇವೆ. ಉಪಾಹಾರದಲ್ಲಿ ಮನೆಯಂತೆಯೇ ಇಡ್ಲಿ, ವಡಾ, ಮೈಸೂರ ಭಾಜಿ, ಮಸಾಲೆ ದೋಸೆ, ಸಾದಾ ದೋಸೆ ಸಿದ್ಧಪಡಿಸುತ್ತೇವೆ. ಆದರೆ, ಬೆಣ್ಣೆ ದೋಸೆ ಬಹುಜನರ ಬೇಡಿಕೆಯ ಉಪಾಹಾರ. ಉತ್ತಮ ಗುಣಮಟ್ಟದ ಶುದ್ಧ ಎಣ್ಣೆ, ಹಿಟ್ಟು, ಬೆಣ್ಣೆ, ಈರುಳ್ಳಿ, ಕೊತ್ತಂಬರಿ, ಮಸಾಲೆ ಬಳಸಿ ಸ್ವಾದಿಷ್ಟ ದೋಸೆ ತಯಾರಿಸುತ್ತೇವೆ. ಅದರೊಂದಿಗೆ ರುಚಿಕರ ಶೇಂಗಾ ಚಟ್ನಿ, ತಾಜಾ ತರಕಾರಿ ಬಳಸಿ ಮಾಡುವ ಸಾಂಬಾರ ನೀಡುತ್ತೇವೆ. ಇದರಿಂದ ಗ್ರಾಹಕರಿಗೆ ಇನ್ನು ಸ್ವಲ್ಪ ಹೆಚ್ಚಿಗೆ ಉಪಹಾರ ತಿನ್ನಬೇಕು ಅನಿಸುತ್ತದೆ ಎಂದು ಮಾಲೀಕ ಮುಕೇಶ ವಿಠಲರಾವ್ ತಿಳಿಸುತ್ತಾರೆ.