ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಶಾಂತ ಮಠಪತಿ ಮಾತನಾಡಿ,‘ಪಿತೃ ಋಣ, ಮಾತೃ ಋಣ, ದೇಶ ಹಾಗೂ ಮಣ್ಣಿನ ಋಣ ತೀರಿಸಬೇಕೆಂದರೆ ಕುಡಿಯುವ ನೀರಿನ ಸಂರಕ್ಷಣೆ ಮಾಡಬೇಕು. ಇಡೀ ಜಗತ್ತನ್ನು ನೀರಿನ ಸಮಸ್ಯೆ ಬಾಧಿಸುತ್ತಿದೆ. ಆದರೆ ನೀರನ್ನು ಮಿತವಾಗಿ, ಅವಶ್ಯಕತೆಗೆ ಅನುಗುಣವಾಗಿ ಬಳಸಿದರೆ ನೀರಿನ ಸಂರಕ್ಷಣೆ ಮಾಡಿದಂತಾಗುತ್ತದೆ. ದೇಶದ ಪಾರಂಪರಿಕ ವ್ಯವಸ್ಥೆಯಲ್ಲಿಯೇ ನೀರಿನ ಸಂರಕ್ಷಣೆಯ ಕುರಿತಾದ ಸಾಕಷ್ಟು ಜ್ಞಾನ ಅಡಗಿದೆ’ ಎಂದರು.