ಆನಂದಾ ಹಾಗೂ ಸುನೀತಾ ಬಟ್ಟೆ ತೊಳೆಯಲು ಹೋದಾಗ ಮಕ್ಕಳು ಈಜಲು ನೀರಿಗೆ ಇಳಿದ ಸಂದರ್ಭದಲ್ಲಿ ಕೆಸರಿನಲ್ಲಿ ಸಿಕ್ಕಿಕೊಂದ್ದರು. ಅವರನ್ನು ಮೇಲಕ್ಕೆತ್ತಲು ಹೋದ ತಾಯಂದಿರೂ ನೀರು ಪಾಲಾಗಿದ್ದಾರೆ. ಜನವಾಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಳುಗು ತಜ್ಞರನ್ನು ಕರೆಸಿ ಶವಗಳ ಶೋಧ ಕಾರ್ಯ ನಡೆಸಿದರು. ಮೂವರ ಶವ ಸಂಜೆ ಪತ್ತೆಯಾಗಿದೆ. ತಡ ರಾತ್ರಿಯ ವರೆಗೂ ಬಾಲಕ ಪತ್ತೆಯಾಗಿಲ್ಲ.