ಬೀದರ್: ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ಕೋವಿಡ್ ಸೋಂಕಿಗೆ ಹೋಂ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಅಶೋಕ ಖೇಣಿ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಉಚಿತ ಔಷಧಿ ವಿತರಿಸಿದರು.
ಮೊಬೈಲ್ ಸಂಖ್ಯೆಗೆ ಕರೆ ಮಾಡಿದವರ ಮನೆ ಬಾಗಿಲಿಗೇ ಹೋಗಿ ಔಷಧಿ ಕೊಟ್ಟರು.
‘ಕೋವಿಡ್ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಅನೇಕರು ಸಾವಿಗೀಡಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಮಾಜಿ ಶಾಸಕ ಅಶೋಕ ಖೇಣಿ ಅವರ ಹೆಸರಲ್ಲಿಯುವಕರ ತಂಡವೊಂದು ಸೋಂಕಿತರ ಸಹಾಯಕ್ಕೆ ಮುಂದಾಗಿರುವುದು ಶ್ಲಾಘನೀಯ’ ಎಂದು ಶಿವಪುತ್ರಪ್ಪ ಕುಂಬಾರ ಹೇಳಿದರು.
‘ಕೋವಿಡ್ ಪ್ರಯುಕ್ತ ವಿಧಿಸಲಾಗಿದ್ದ ಲಾಕ್ಡೌನ್ ಸಂದರ್ಭದಲ್ಲಿ ಅಶೋಕ ಖೇಣಿ ಅವರು ನಿರ್ಗತಿಕರಿಗೆ ಆಹಾರ ಕಿಟ್ ಹಾಗೂ ತರಕಾರಿ ವಿತರಿಸಿದ್ದರು’ ಎಂದು ಸ್ಮರಿಸಿದರು.
ಅಶೋಕ ಖೇಣಿ ಅಭಿಮಾನಿಗಳ ಸಂಘದಸದಸ್ಯರಾದ ರಮೇಶ ಹೌದಖಾನಿ, ಪ್ರಶಾಂತ ಜೈನ್,ಓಂಕಾರ ಕೊಡ್ಡಿ ಇದ್ದರು.