ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾ ನಾಯಕಿ ಸಮಿತಿಯ ಜಿಲ್ಲಾ ಸಂಯೋಜಕಿಯಾಗಿ ಗೀತಾ ಚಿದ್ರಿ ನೇಮಕ

Last Updated 1 ಅಕ್ಟೋಬರ್ 2022, 13:09 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯವರೇ ಆದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೀತಾ ಚಿದ್ರಿ ಹಾಗೂ ಜಯಲಕ್ಷ್ಮಿ ಪುಥ್ರಾನ್ ಅವರನ್ನು ಭಾರತ ಐಕ್ಯತಾ ಯಾತ್ರೆಯ ನಾ ನಾಯಕಿ ಸಮಿತಿಯ ಬೀದರ್ ಜಿಲ್ಲಾ ಸಂಯೋಜಕಿಯರನ್ನಾಗಿ ನೇಮಕ ಮಾಡಲಾಗಿದೆ.

ತಾಲ್ಲೂಕು ಸಂಘಟಕರ ಹೆಸರು ಹೀಗಿವೆ. ಮೀನಾಕ್ಷಿ ಸಂಗ್ರಾಮ (ಬೀದರ್ ತಾಲ್ಲೂಕು), ಗುರಮ್ಮ ಸಿದ್ದಾರೆಡ್ಡಿ (ಭಾಲ್ಕಿ), ಸುರೇಖಾ ರೆಡ್ಡಿ (ಹುಮನಾಬಾದ್), ಲತಾ ರಾಠೋಡ್ (ಬಸವಕಲ್ಯಾಣ), ಕಮಲಾ (ಹುಲಸೂರು), ರಾಜೇಶ್ವರಿ ಸ್ವಾಮಿ (ಚಿಟಗುಪ್ಪ) ಮತ್ತು ವೆನಿಲಾ ಸೂರ್ಯವಂಶಿ (ಕಮಲನಗರ).

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸ್ತ್ರೀ ಶಕ್ತಿ ಸಂಘಟನಾ ಸಮಿತಿಯ ಅಧ್ಯಕ್ಷೆ ಉಮಾಶ್ರೀ ತಿಳಿಸಿದ್ದಾರೆ.

ಪದಾಧಿಕಾರಿಗಳು ಕೂಡಲೇ ತಮ್ಮ ಜವಾಬ್ದಾರಿ ವಹಿಸಿಕೊಂಡು ಭಾರತ ಐಕ್ಯತಾ ಯಾತ್ರೆ ಯಶಸ್ವಿಗೆ ಶ್ರಮಿಸಬೇಕು ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT