ನಾರಾಯಣಪುರ ದೊಡ್ಡ ಗ್ರಾಮ. ಈ ವರ್ಷ ಮಳೆ ಕೊರತೆ ಕಾರಣ ಇಲ್ಲಿನ ಜಲಮೂಲಗಳು ಬರಿದಾಗಿವೆ. ಒಂದನೇ ವಾರ್ಡ್ನಲ್ಲಿ 10 ಕೊಳವೆ ಬಾವಿಗಳಿವೆ. ಅವುಗಳಲ್ಲಿ ಈಗಾಗಲೇ ಅಂತರ್ಜಲ ಪಾತಾಳ ಕಂಡಿದೆ. ಸಮರ್ಪಕವಾಗಿ ನೀರು ಬರುತ್ತಿಲ್ಲ. ವಾರ್ಡ್ ನಿವಾಸಿಗಳು ಪರದಾಡುವ ಪರಿಸ್ಥಿತಿ ಇತ್ತು. ಅದನ್ನು ಮನಗೊಂಡ ಅರ್ಜುನ ಸಿಂಗ್ ನೀರಿನ ವ್ಯವಸ್ಥೆ ಮಾಡಿದ್ದಾರೆ.