ಗ್ರಾಮ ಪಂಚಾಯಿತಿ ಸದಸ್ಯ ಗುಲಾಮ್ ಬಡಾಯಿ ಅವರ ದೂರಿನ ಮೇರೆಗೆ ವಾಹನಗಳ ಜಪ್ತಿ ನಡೆದಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಗುಲಾಮ್ ಬಡಾಯಿ ಅವರು,‘ಆಹಾರ ಧಾನ್ಯ ಇಳಿಸುತ್ತಿದ್ದ ವೇಳೆ ಸ್ಥಳಕ್ಕೆ ಹೋದಾಗ ವಾಹನ ಕೆಟ್ಟಿದ್ದರಿಂದ ಆಹಾರ ಧಾನ್ಯ ಇಲ್ಲಿ ಇಳಿಸುತ್ತಿದ್ದೇವೆ ಎಂಬ ಸಬೂಬು ಹೇಳಲಾಗಿದೆ. ಆದರೆ, ಪ್ರತಿ ತಿಂಗಳು ಅಂಗನವಾಡಿಗಳಿಗೆ ಆಹಾರ ಧಾನ್ಯ ತೆಗೆದುಕೊಂಡು ಹೋಗದೆ ಇಲ್ಲಿಯೇ ಇಳಿಸಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.