<p><strong>ಔರಾದ್:</strong> ತಾಲ್ಲೂಕಿನ ಯನಗುಂದಾ ಗ್ರಾಮದಲ್ಲಿ ಸೋಮವಾರ ಸಂಜೆ ಭಕ್ತರ ಹರ್ಷೋಲ್ಲಾಸ ಹಾಗೂ ಜಯಘೋಷಣೆ ನಡುವೆ ಶಿವ-ಪಾರ್ವತಿ ಮೂರ್ತಿ ಪ್ರತಿಷ್ಠಾಪಿಸಲಾಯಿತು.</p>.<p>ಹಣೆಗಾಂವ್ ಮಠದ ಶಂಕರಲಿಂಗ ಸ್ವಾಮೀಜಿ, ಡಾಕುಳಗಿಯ ಚನ್ನಬಸವೇಶ್ವರ ಸ್ವಾಮೀಜಿ, ಮಹಾದೇವ ಸ್ವಾಮೀಜಿ, ಮಲ್ಲಯ್ಯ ಸ್ವಾಮೀಜಿ ಅವರು ಧಾರ್ಮಿಕ ವಿಧಿ ವಿಧಾನದ ಮೂಲಕ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿಸಿದರು.</p>.<p>ಹಣೆಗಾಂವ್ ಮಠದ ಶಂಕರಲಿಂಗ ಸ್ವಾಮೀಜಿ ಮಾತನಾಡಿ,‘ಯನಗುಂದಾ ಭಕ್ತರು ಧಾರ್ಮಿಕ ಕಾರ್ಯಕ್ರಮ ನಡೆಸಿ ಯುವ ಪೀಳಿಗೆಯಲ್ಲಿ ಉತ್ತಮ ಸಂಸ್ಕಾರ ಬಿತ್ತಿದ್ದಾರೆ. ಸಮಾಜದಲ್ಲಿ ಸದಾ ಇಂತಹ ಕಾರ್ಯ ನೆರವೇರಬೇಕು’ ಎಂದು ಹೇಳಿದರು.</p>.<p>‘ಎಲ್ಲಿ ಭಕ್ತಿ ಇರುತ್ತದೆ, ಅಲ್ಲಿ ದೇವರು ಇರುತ್ತಾನೆ. ದೇವರು ಎಂದ ಕ್ಷಣ ಮನುಷ್ಯನಲ್ಲಿ ಭಯ, ಭಕ್ತಿ ಇರುತ್ತದೆ. ಇದರಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ’ ಎಂದು ತಿಳಿಸಿದರು.</p>.<p>ಮುಖಂಡ ಗುಂಡಯ್ಯ ಸ್ವಾಮಿ, ಗುರಯ್ಯ ಸ್ವಾಮಿ, ವಿಜಯಕುಮಾರ ಮೇತ್ರೆ, ಕಲ್ಲಯ್ಯ ಸ್ವಾಮಿ, ಗುರುಪಾದಪ್ಪ ಕೋರೆ, ಸಿದ್ರಾಮ ಕೋರೆ, ಅಶೋಕ ಶೆಟಕಾರ, ಕೃಷ್ಣ ಕಾಂಬಳೆ, ಬಸವರಾಜ ಪಾಟೀಲ, ಸಿದ್ದು ಪಾಟೀಲ, ಸಿದ್ದು ಹಂಗರಗೆ, ಪ್ರಭು ಪಾಟೀಲ, ಉಮಾಕಾಂತ ಮೊರೆ, ಬಸವರಾಜ ವಾಡೆ ಇದ್ದರು.</p>.<p>ಯನಗುಂದಾ ಹಾಗೂ ಸುತ್ತಲಿನ ಗ್ರಾಮಗಳ ಅಪಾರ ಸಂಖ್ಯೆ ಭಕ್ತರು ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್:</strong> ತಾಲ್ಲೂಕಿನ ಯನಗುಂದಾ ಗ್ರಾಮದಲ್ಲಿ ಸೋಮವಾರ ಸಂಜೆ ಭಕ್ತರ ಹರ್ಷೋಲ್ಲಾಸ ಹಾಗೂ ಜಯಘೋಷಣೆ ನಡುವೆ ಶಿವ-ಪಾರ್ವತಿ ಮೂರ್ತಿ ಪ್ರತಿಷ್ಠಾಪಿಸಲಾಯಿತು.</p>.<p>ಹಣೆಗಾಂವ್ ಮಠದ ಶಂಕರಲಿಂಗ ಸ್ವಾಮೀಜಿ, ಡಾಕುಳಗಿಯ ಚನ್ನಬಸವೇಶ್ವರ ಸ್ವಾಮೀಜಿ, ಮಹಾದೇವ ಸ್ವಾಮೀಜಿ, ಮಲ್ಲಯ್ಯ ಸ್ವಾಮೀಜಿ ಅವರು ಧಾರ್ಮಿಕ ವಿಧಿ ವಿಧಾನದ ಮೂಲಕ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿಸಿದರು.</p>.<p>ಹಣೆಗಾಂವ್ ಮಠದ ಶಂಕರಲಿಂಗ ಸ್ವಾಮೀಜಿ ಮಾತನಾಡಿ,‘ಯನಗುಂದಾ ಭಕ್ತರು ಧಾರ್ಮಿಕ ಕಾರ್ಯಕ್ರಮ ನಡೆಸಿ ಯುವ ಪೀಳಿಗೆಯಲ್ಲಿ ಉತ್ತಮ ಸಂಸ್ಕಾರ ಬಿತ್ತಿದ್ದಾರೆ. ಸಮಾಜದಲ್ಲಿ ಸದಾ ಇಂತಹ ಕಾರ್ಯ ನೆರವೇರಬೇಕು’ ಎಂದು ಹೇಳಿದರು.</p>.<p>‘ಎಲ್ಲಿ ಭಕ್ತಿ ಇರುತ್ತದೆ, ಅಲ್ಲಿ ದೇವರು ಇರುತ್ತಾನೆ. ದೇವರು ಎಂದ ಕ್ಷಣ ಮನುಷ್ಯನಲ್ಲಿ ಭಯ, ಭಕ್ತಿ ಇರುತ್ತದೆ. ಇದರಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ’ ಎಂದು ತಿಳಿಸಿದರು.</p>.<p>ಮುಖಂಡ ಗುಂಡಯ್ಯ ಸ್ವಾಮಿ, ಗುರಯ್ಯ ಸ್ವಾಮಿ, ವಿಜಯಕುಮಾರ ಮೇತ್ರೆ, ಕಲ್ಲಯ್ಯ ಸ್ವಾಮಿ, ಗುರುಪಾದಪ್ಪ ಕೋರೆ, ಸಿದ್ರಾಮ ಕೋರೆ, ಅಶೋಕ ಶೆಟಕಾರ, ಕೃಷ್ಣ ಕಾಂಬಳೆ, ಬಸವರಾಜ ಪಾಟೀಲ, ಸಿದ್ದು ಪಾಟೀಲ, ಸಿದ್ದು ಹಂಗರಗೆ, ಪ್ರಭು ಪಾಟೀಲ, ಉಮಾಕಾಂತ ಮೊರೆ, ಬಸವರಾಜ ವಾಡೆ ಇದ್ದರು.</p>.<p>ಯನಗುಂದಾ ಹಾಗೂ ಸುತ್ತಲಿನ ಗ್ರಾಮಗಳ ಅಪಾರ ಸಂಖ್ಯೆ ಭಕ್ತರು ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>