ಬಸವಕಲ್ಯಾಣ: ‘ಶರಣರು ಕಟ್ಟಿದ್ದ ಕಲ್ಯಾಣವೆಂದರೆ ಪಟ್ಟಣವಲ್ಲ. ಅದು ದೂರದೃಷ್ಟಿ, ಉತ್ತಮ ಸಂಸ್ಕಾರದ ಕೇಂದ್ರ. ಅದು ಕಾಯಕ, ದಾಸೋಹದ ಕೇಂದ್ರ, ಪ್ರೇಮದ ಕೋಟೆ’ ಎಂದು ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ. ನಗರದ ತೇರು ಮೈದಾನದಲ್ಲಿ ಶನಿವಾರ ನಡೆದ ಬಸವಕಲ್ಯಾಣ ಯಾತ್ರಾ ಪರ್ವದ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.