<p><strong>ಮಂದಕನಳ್ಳಿ(ಜನವಾಡ):</strong> ಬೀದರ್ ತಾಲ್ಲೂಕಿನ ಕಮಠಾಣ-ಬಾವಗಿ ರಸ್ತೆ ನಿರ್ಮಾಣ ಕಾಮಗಾರಿ ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.</p>.<p>ಬೀದರ್ ತಾಲ್ಲೂಕಿನ ಮಂದಕನಳ್ಳಿ ಸಮೀಪ ಪೇವರ್ ಯಂತ್ರದಿಂದ ನಡೆಯುತ್ತಿರುವ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಅವರು ಮಾತನಾಡಿದರು.</p>.<p>‘ಕೇಂದ್ರ ರಸ್ತೆ ನಿಧಿಯ ₹ 6 ಕೋಟಿ ವೆಚ್ಚದಲ್ಲಿ 8 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲಾಗುತ್ತಿದೆ. 15 ಅಡಿ ಅಗಲದ ಈ ರಸ್ತೆ ನಿರ್ಮಾಣದ ನಂತರ ಕಮಠಾಣ, ಶಮಶೀರನಗರ, ಕಂಗನಕೋಟ್, ಬಾವಗಿ, ಸಿರ್ಸಿ(ಎ), ನೆಲವಾಡ, ಸಂಗೋಳಗಿ ಹಾಗೂ ಇತರ ಗ್ರಾಮಗಳಿಗೆ ಸಂಪರ್ಕ ಸುಲಭವಾಗಲಿದೆ’ ಎಂದು ತಿಳಿಸಿದರು.</p>.<p>‘ಗುಣಮಟ್ಟದೊಂದಿಗೆ ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸಿದರು.</p>.<p>‘ಬರುವ ದಿನಗಳಲ್ಲಿ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದಿಂದ ಕಮಠಾಣ ವರೆಗೆ ರಸ್ತೆ ವಿಭಜಕ, ಬೀದಿ ದೀಪ ಸಹಿತ ದ್ವಿಪಥ ರಸ್ತೆ ನಿರ್ಮಿಸುವ ಯೋಜನೆಯಿದೆ’ ಎಂದು ತಿಳಿಸಿದರು.</p>.<p>ಶಾಸಕರು ಪೇವರ್ ಯಂತ್ರವನ್ನು ಸ್ವಲ್ಪ ಖುದ್ದು ಚಲಾಯಿಸಿದರು. ಗೇಜ್ ಹಿಡಿದು, ರಸ್ತೆ ಅಗೆದು, ಗುಣಮಟ್ಟ ಪರೀಕ್ಷಿಸಿದರು.</p>.<p>ಕನ್ಸ್ಟ್ರಕ್ಷನ್ಸ್ ಸಂಸ್ಥೆ ಮುಖ್ಯಸ್ಥ ಶಂಕರರಾವ ಕೊಟರಕಿ, ಮುಖಂಡರಾದ ಸುರೇಶ ಮಾಶೆಟ್ಟಿ, ನಾಗಭೂಷಣ ಕಮಠಾಣೆ, ಚಂದ್ರಯ್ಯ ಸ್ವಾಮಿ, ಉಮೇಶ ಯಾಬಾ, ಸಂತೋಷ ರೆಡ್ಡಿ, ರಾಜಶೇಖರ ನೌಬಾದೆ, ಓಂಕಾರ ಮಜಗೆ, ರಾಜಕುಮಾರ ಪಾಟೀಲ ಮೊದಲಾದವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂದಕನಳ್ಳಿ(ಜನವಾಡ):</strong> ಬೀದರ್ ತಾಲ್ಲೂಕಿನ ಕಮಠಾಣ-ಬಾವಗಿ ರಸ್ತೆ ನಿರ್ಮಾಣ ಕಾಮಗಾರಿ ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.</p>.<p>ಬೀದರ್ ತಾಲ್ಲೂಕಿನ ಮಂದಕನಳ್ಳಿ ಸಮೀಪ ಪೇವರ್ ಯಂತ್ರದಿಂದ ನಡೆಯುತ್ತಿರುವ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಅವರು ಮಾತನಾಡಿದರು.</p>.<p>‘ಕೇಂದ್ರ ರಸ್ತೆ ನಿಧಿಯ ₹ 6 ಕೋಟಿ ವೆಚ್ಚದಲ್ಲಿ 8 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲಾಗುತ್ತಿದೆ. 15 ಅಡಿ ಅಗಲದ ಈ ರಸ್ತೆ ನಿರ್ಮಾಣದ ನಂತರ ಕಮಠಾಣ, ಶಮಶೀರನಗರ, ಕಂಗನಕೋಟ್, ಬಾವಗಿ, ಸಿರ್ಸಿ(ಎ), ನೆಲವಾಡ, ಸಂಗೋಳಗಿ ಹಾಗೂ ಇತರ ಗ್ರಾಮಗಳಿಗೆ ಸಂಪರ್ಕ ಸುಲಭವಾಗಲಿದೆ’ ಎಂದು ತಿಳಿಸಿದರು.</p>.<p>‘ಗುಣಮಟ್ಟದೊಂದಿಗೆ ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸಿದರು.</p>.<p>‘ಬರುವ ದಿನಗಳಲ್ಲಿ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದಿಂದ ಕಮಠಾಣ ವರೆಗೆ ರಸ್ತೆ ವಿಭಜಕ, ಬೀದಿ ದೀಪ ಸಹಿತ ದ್ವಿಪಥ ರಸ್ತೆ ನಿರ್ಮಿಸುವ ಯೋಜನೆಯಿದೆ’ ಎಂದು ತಿಳಿಸಿದರು.</p>.<p>ಶಾಸಕರು ಪೇವರ್ ಯಂತ್ರವನ್ನು ಸ್ವಲ್ಪ ಖುದ್ದು ಚಲಾಯಿಸಿದರು. ಗೇಜ್ ಹಿಡಿದು, ರಸ್ತೆ ಅಗೆದು, ಗುಣಮಟ್ಟ ಪರೀಕ್ಷಿಸಿದರು.</p>.<p>ಕನ್ಸ್ಟ್ರಕ್ಷನ್ಸ್ ಸಂಸ್ಥೆ ಮುಖ್ಯಸ್ಥ ಶಂಕರರಾವ ಕೊಟರಕಿ, ಮುಖಂಡರಾದ ಸುರೇಶ ಮಾಶೆಟ್ಟಿ, ನಾಗಭೂಷಣ ಕಮಠಾಣೆ, ಚಂದ್ರಯ್ಯ ಸ್ವಾಮಿ, ಉಮೇಶ ಯಾಬಾ, ಸಂತೋಷ ರೆಡ್ಡಿ, ರಾಜಶೇಖರ ನೌಬಾದೆ, ಓಂಕಾರ ಮಜಗೆ, ರಾಜಕುಮಾರ ಪಾಟೀಲ ಮೊದಲಾದವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>