‘ಬೇಗನೆ ಲಸಿಕೆ ಕೊಡಿ ಇಲ್ಲವೇ ಅಧಿಕಾರ ಬಿಡಿ', ‘ಚುನಾವಣೆ ಬೂತ್ಗಳ ಹಾಗೆ ಕೋವಿಡ್ ಲಸಿಕೆ ಬೂತ್ ಸ್ಥಾಪಿಸಿ, ಜನಸಾಮಾನ್ಯರಿಗೆ ಕಾಯಿಸದೆ ಲಸಿಕೆ ಕೊಡಿ', ‘ಲಸಿಕೆ ವಿತರಣೆಯಲ್ಲೂ ಹಣ ಗಳಿಸುವ ದಂಧೆ ಬೇಕೆ? ಜೀವ ರಕ್ಷಕ ತಡೆಮದ್ದಿಗೂ ಕಾಳಸಂತೆ ವ್ಯವಹಾರ ಬೇಕೆ?', ‘ಮೊದಲ ಅಲೆಯಲ್ಲಿ 20 ಲಕ್ಷ ಕೋಟಿಯ ಸುಳ್ಳು ಘೋಷಣೆ, ಎರಡನೇ ಅಲೆಯಲ್ಲಿ ಲಭ್ಯವೇ ಇಲ್ಲದ ಲಸಿಕೆ ಘೋಷಣೆ ಹೇಗೆ ನಂಬುವುದು ನಿಮ್ಮನ್ನು', ‘ನಿಮಗೆ ಕರ್ನಾಟಕದಿಂದ ಲಕ್ಷ ಕೋಟಿ ತೆರಿಗೆ ಬೇಕು, ಕನ್ನಡಿಗರಿಗೆ ಲಸಿಕೆ ಕೊಡಲು ನಿಮ್ಮಿಂದೇಕೆ ಆಗದು’, ‘ಮತ ಭಿಕ್ಷೆಗಾಗಿ ಮನೆ ಮನೆಗೆ ಹತ್ತಾರು ಬಾರಿ ಬರುವವರಿಗೆ ಲಸಿಕೆ ಕೊಡಲು ಮನೆ ಮನೆಗೆ ಬರಲು ಸಾಧ್ಯವಿಲ್ಲವೇ?', ‘ಕರ್ನಾಟಕದಲ್ಲಿ ಹಣ ತೆತ್ತರೂ ಸಿಗದ ಲಸಿಕೆ, ಗುಜರಾತಿನಲ್ಲಿ ಉಚಿತವಾಗಿ ಸಿಗುತ್ತಿರುವುದಾದರೂ ಹೇಗೆ?' ಎಂಬಿತ್ಯಾದಿ ಘೋಷಣಾ ಫಲಕಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದರು.