ಹುಲಸೂರ: ಪಟ್ಟಣದಲ್ಲಿ ಕುಂಬಾರರು ಹಾಗೂ ಸ್ವಾಮಿ ಮನೆತನದವರು 25 ವರ್ಷಗಳಿಂದ ಮಣ್ಣಿನ ಗಣೇಶನ ಮೂರ್ತಿಗಳನ್ನು ತಯಾರಿಸಿ ಮನೆ ಮನೆಗೆ ತೆರಳಿ ವಿತರಿ ಸಿ ಅವರು ಕೊಟ್ಟದ್ದನ್ನು ತೆಗೆದುಕೊಂಡು ಬರುತ್ತಿದ್ದರು. ಆದರೆ, ಕೆರೆ ಹಾಗೂ ಹಳ್ಳದ ದಡದಲ್ಲಿ ಮಣ್ಣು ದೊರೆಯದ ಕಾರಣ ಈಗ ಆ ಕೆಲಸವನ್ನು ಮುಂದುವರಿಸಿಕೊಂಡು ಹೋಗಲು ಆಗುತ್ತಿಲ್ಲ.