<p><strong>ಬಸವಕಲ್ಯಾಣ</strong>: ‘ಶರಣ ಮಡಿವಾಳ ಮಾಚಿದೇವರು ತನ್ನ ಕಾರ್ಯಗಳಿಂದ 12ನೇ ಶತಮಾನದಲ್ಲಿನ ಶರಣರಲ್ಲಿ ವೀರ ಗಣಾಚಾರಿ ಎಂದು ಹೆಸರು ಪಡೆದಿದ್ದರು’ ಎಂದು ಮುಚಳಂಬ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.</p>.<p>ನಗರದ ಮಡಿವಾಳ ಮಾಚಿದೇವರ ದೇವಸ್ಥಾನದಲ್ಲಿ ಸೋಮವಾರ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ತತ್ವದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಮಡಿವಾಳ ಸಮಾಜದ ಜನರು ಸಹ ಸ್ವಾಭಿಮಾನಿ ಆಗಿದ್ದಾರೆ. ಬಟ್ಟೆ ಸ್ವಚ್ಛಗೊಳಿಸಿ ಕೊಳೆ ತೆಗೆಯುವ ಕೆಲಸ ಮಾಡಿದರೂ ಪ್ರಾಮಾಣಿಕರಾಗಿ, ಧರ್ಮ ಮಾರ್ಗದಲ್ಲಿ ನಡೆಯುತ್ತಾರೆ’ ಎಂದರು.</p>.<p>ಅನುಭವ ಮಂಟಪ ಸಂಚಾಲಕ ಶಿವಾನಂದ ದೇವರು ಮಾತನಾಡಿ,‘ಮಡಿವಾಳ ಮಾಚಿದೇವರು ಬಸವತತ್ವ ನಿಷ್ಠರು, ಶರಣಗಣ ಮತ್ತು ವಚನ ಸಾಹಿತ್ಯದ ಸಂರಕ್ಷಕರು ಆಗಿದ್ದಾರೆ. ಅವರ ಸಂದೇಶದ ಪಾಲನೆ ಅಗತ್ಯ’ ಎಂದು ಹೇಳಿದರು.</p>.<p>ಬಂದವರ ಓಣಿ ಅಕ್ಕಮಹಾದೇವಿ ಗವಿಯ ಸತ್ಯಕ್ಕತಾಯಿ ಮಾತನಾಡಿ,‘ಮಾಚಿದೇವರು ಕಲ್ಯಾಣವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿ ಧರ್ಮ ಕಾರ್ಯದಲ್ಲಿ ತೊಡಗಿದ್ದರು’ ಎಂದರು.</p>.<p>ಮಡಿವಾಳ ಸಮಾಜ ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ದಿಗಂಬರ ಮಡಿವಾಳ, ತಾಲ್ಲೂಕು ಘಟಕದ ಅಧ್ಯಕ್ಷ ಗಣಪತಿ ಸಸ್ತಾಪುರೆ, ರವೀಂದ್ರ ಮಡಿವಾಳ, ಸಂತೋಷ ಮಡಿವಾಳ ಪ್ರತಾಪುರ ಹಾಗೂ ಬಸವರಾಜ ಮಡಿವಾಳ ಮಾತನಾಡಿದರು.</p>.<p>ದಿಲೀಪ ಮಡಿವಾಳ, ವಿಜಯಕುಮಾರ ಮಡಿವಾಳ, ವೀರಶೆಟ್ಟಿ ಮಡಿವಾಳ, ಭಗವಾನರಾವ್ ಮಡಿವಾಳ, ದತ್ತು ಮಡಿವಾಳ ಹುಮನಾಬಾದ್, ಬಸವರಾಜ ಮಡಿವಾಳ ಚಿಟಗುಪ್ಪ ಹಾಗೂ ಸುಧೀರ ಮಡಿವಾಳ ಔರಾದ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ</strong>: ‘ಶರಣ ಮಡಿವಾಳ ಮಾಚಿದೇವರು ತನ್ನ ಕಾರ್ಯಗಳಿಂದ 12ನೇ ಶತಮಾನದಲ್ಲಿನ ಶರಣರಲ್ಲಿ ವೀರ ಗಣಾಚಾರಿ ಎಂದು ಹೆಸರು ಪಡೆದಿದ್ದರು’ ಎಂದು ಮುಚಳಂಬ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.</p>.<p>ನಗರದ ಮಡಿವಾಳ ಮಾಚಿದೇವರ ದೇವಸ್ಥಾನದಲ್ಲಿ ಸೋಮವಾರ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ತತ್ವದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಮಡಿವಾಳ ಸಮಾಜದ ಜನರು ಸಹ ಸ್ವಾಭಿಮಾನಿ ಆಗಿದ್ದಾರೆ. ಬಟ್ಟೆ ಸ್ವಚ್ಛಗೊಳಿಸಿ ಕೊಳೆ ತೆಗೆಯುವ ಕೆಲಸ ಮಾಡಿದರೂ ಪ್ರಾಮಾಣಿಕರಾಗಿ, ಧರ್ಮ ಮಾರ್ಗದಲ್ಲಿ ನಡೆಯುತ್ತಾರೆ’ ಎಂದರು.</p>.<p>ಅನುಭವ ಮಂಟಪ ಸಂಚಾಲಕ ಶಿವಾನಂದ ದೇವರು ಮಾತನಾಡಿ,‘ಮಡಿವಾಳ ಮಾಚಿದೇವರು ಬಸವತತ್ವ ನಿಷ್ಠರು, ಶರಣಗಣ ಮತ್ತು ವಚನ ಸಾಹಿತ್ಯದ ಸಂರಕ್ಷಕರು ಆಗಿದ್ದಾರೆ. ಅವರ ಸಂದೇಶದ ಪಾಲನೆ ಅಗತ್ಯ’ ಎಂದು ಹೇಳಿದರು.</p>.<p>ಬಂದವರ ಓಣಿ ಅಕ್ಕಮಹಾದೇವಿ ಗವಿಯ ಸತ್ಯಕ್ಕತಾಯಿ ಮಾತನಾಡಿ,‘ಮಾಚಿದೇವರು ಕಲ್ಯಾಣವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿ ಧರ್ಮ ಕಾರ್ಯದಲ್ಲಿ ತೊಡಗಿದ್ದರು’ ಎಂದರು.</p>.<p>ಮಡಿವಾಳ ಸಮಾಜ ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ದಿಗಂಬರ ಮಡಿವಾಳ, ತಾಲ್ಲೂಕು ಘಟಕದ ಅಧ್ಯಕ್ಷ ಗಣಪತಿ ಸಸ್ತಾಪುರೆ, ರವೀಂದ್ರ ಮಡಿವಾಳ, ಸಂತೋಷ ಮಡಿವಾಳ ಪ್ರತಾಪುರ ಹಾಗೂ ಬಸವರಾಜ ಮಡಿವಾಳ ಮಾತನಾಡಿದರು.</p>.<p>ದಿಲೀಪ ಮಡಿವಾಳ, ವಿಜಯಕುಮಾರ ಮಡಿವಾಳ, ವೀರಶೆಟ್ಟಿ ಮಡಿವಾಳ, ಭಗವಾನರಾವ್ ಮಡಿವಾಳ, ದತ್ತು ಮಡಿವಾಳ ಹುಮನಾಬಾದ್, ಬಸವರಾಜ ಮಡಿವಾಳ ಚಿಟಗುಪ್ಪ ಹಾಗೂ ಸುಧೀರ ಮಡಿವಾಳ ಔರಾದ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>