<p><strong>ಬಸವಕಲ್ಯಾಣ:</strong> ‘ಪಟ್ಟಣದಲ್ಲಿ ಖಾಲಿ ನಿವೇಶನಗಳಲ್ಲಿ ಹುಲ್ಲು, ಮುಳ್ಳುಕಂಟಿಗಳು ಬೆಳೆದಿವೆ. ಸ್ವಚ್ಛತೆ ಕಾಪಾಡುವಂತೆ ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡಬೇಕು’ ಎಂದು ಶಾಸಕ ಬಿ.ನಾರಾಯಣರಾವ್ ಅಧಿಕಾರಿಗಳಿಗೆ ಸೂಚಿಸಿದರು.</p>.<p>ಇಲ್ಲಿ ಶನಿವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.</p>.<p>`ಉದ್ಯಾನಕ್ಕಾಗಿ ಜಾಗ ಮತ್ತು ಸಿ.ಎ ಸೈಟ್ ಕಾಯ್ದಿರಿಸಿ ಅದರ ದಾಖಲೆಗಳನ್ನು ನಗರಸಭೆಗೆ ಸಲ್ಲಿಸದೆ ನಿವೇಶನ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಉದ್ಯಾನದ ಸ್ಥಳದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದರೆ ಅವುಗಳನ್ನು ನೆಲಸಮ ಮಾಡಬೇಕು’ ಎಂದರು.</p>.<p>‘ರಸ್ತೆ, ಚರಂಡಿ ನಿರ್ಮಾಣಕ್ಕೆ ಟೆಂಡರ್ ಪಡೆದು ನಿಗದಿತ ಸಮಯಕ್ಕೆ ಕೆಲಸ ನಿರ್ವಹಿಸದವರ ವಿರುದ್ಧ ಪ್ರಕರಣ ದಾಖಲಿಸಬೇಕು' ಎಂದು ತಾಕೀತು ಮಾಡಿದರು.</p>.<p>`ಪ್ರತಿ ವಾರ್ಡ್ನಲ್ಲಿ ಬಾಕಿ ಉಳಿದ ಕೆಲಸ ಮತ್ತು ಸಮಸ್ಯೆಗಳ ಬಗ್ಗೆ ನಗರಸಭೆ ಎಂಜಿನಿಯರ್ಗಳು ಎರಡು ವಾರದಲ್ಲಿ ಪಟ್ಟಿ ಸಿದ್ಧಪಡಿಸಬೇಕು. ನಗರಸಭೆಯ ಸೌಲಭ್ಯಗಳು, ಸಾಲದ ಯೋಜನೆ ಹಾಗೂ ಮಂಜೂರಾದ ಮನೆಗಳ ಮಾಹಿತಿ ಸದಸ್ಯರಿಗೆ ಹಾಗೂ ಇತರ ಜನಪ್ರತಿನಿಧಿಗಳಿಗೆ ಸುಲಭವಾಗಿ ದೊರಕುವುದಿಲ್ಲ. ಆದರೆ, ಈ ಬಗ್ಗೆ ದಲ್ಲಾಳಿಗಳ ಹತ್ತಿರ ಸಂಪೂರ್ಣ ವಿವರ ಇರುತ್ತದೆ. ಇಂಥ ವ್ಯವಸ್ಥೆ ಸಲ್ಲದು' ಎಂದು ಕಿಡಿ ಕಾರಿದರು.</p>.<p>`ಅಟೊ ನಗರದಲ್ಲಿ ಟಿಪ್ಪುಸುಲ್ತಾನ್ ವೃತ್ತ ನಿರ್ಮಿಸುವ ಬಗ್ಗೆ ಹಿಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಪ್ರತಿ ಒದಗಿಸಿದರೆ ಅದಕ್ಕಾಗಿ ಅನುದಾನ ಒದಗಿಸಲಾಗುವುದು. ಪಟ್ಟಣದಲ್ಲಿ ಇನ್ನೂ ಎರಡು ಇಂದಿರಾ ಕ್ಯಾಂಟೀನ್ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು' ಎಂದು ಹೇಳಿದರು.</p>.<p>ಸದಸ್ಯ ರವಿ ಗಾಯಕವಾಡ, `ನಗರೋತ್ಥಾನ ಯೋಜನೆಯಲ್ಲಿನ ಕುಂಬಾರಪಾಳಿ ರಸ್ತೆ ನಿರ್ಮಾಣ ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಪೌರಕಾರ್ಮಿಕರ ಬಾಕಿ ಇರುವ ವೇತನ ಪಾವತಿಸಬೇಕು' ಎಂದು ಆಗ್ರಹಿಸಿದರು.</p>.<p>ಅನಿಲ ಕುಲಕರ್ಣಿ ಮಾತನಾಡಿ, `ಪಟ್ಟಣದ ನಿವಾಸಿಗಳನ್ನು ಮಾತ್ರ ಪೌರಕಾರ್ಮಿಕರನ್ನಾಗಿ ನೇಮಿಸಿಕೊಳ್ಳಬೇಕು. 20 ಕಿ.ಮೀ ದೂರದಿಂದ ಬರುವವರಿಂದ ಕೆಲಸ ಆಗುವುದಿಲ್ಲ' ಎಂದರು.</p>.<p>ರವಿ ಕೊಳಕೂರ, `18 ನೇ ವಾರ್ಡ್ನ ಉದ್ಯಾನದಲ್ಲಿ ಪೈಪ್ಗಳನ್ನು ಇಡಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಅಗುತ್ತಿದೆ. ಶೀಘ್ರ ಅವುಗಳನ್ನು ತೆರವುಗೊಳಿಸಬೇಕು' ಎಂದು ಒತ್ತಾಯಿಸಿದರು.</p>.<p>`24 ಗಂಟೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯಲ್ಲಿ ಎಲ್ಲ ಓಣಿಗಳಲ್ಲಿ ಪೈಪ್ಲೈನ್ ಅಳವಡಿಸಿಲ್ಲ' ಎಂದು ಮುಜಮಿಲ್ ಸಗ್ಗೆ, ಪೇಶಮಾಮ್ ಆಕ್ರೋಶ ವ್ಯಕ್ತಪಡಿಸಿದರು.</p>.<p>ಅಧ್ಯಕ್ಷ ಅಜರಅಲಿ ನವರಂಗ ಮಾತನಾಡಿ, ` ಪ್ರತಿ ತಿಂಗಳು ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು' ಎಂದರು.</p>.<p>ಪೌರಾಯುಕ್ತ ಸುರೇಶ ಬಬಲಾದ ಸಭೆಯ ನಿರ್ಣಯಗಳನ್ನು ಓದಿದರು. ಅಕ್ತರ್ ಬಾಗ್, ಹಾಜರಾಬಿ ಇದ್ದರು. ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಮತ್ತು ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.</p>.<p>ಸ್ವಚ್ಛ ಮತ್ತು ಸುಂದರ ಬಸವಕಲ್ಯಾಣ ಆಗಬೇಕು. ಅದಕ್ಕಾಗಿ ರಸ್ತೆ, ಚರಂಡಿ ವ್ಯವಸ್ಥೆ ಉತ್ತಮಗೊಳಿಸಲು, ಉದ್ಯಾನಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳುತ್ತೇನೆ<br /><strong>-ಬಿ.ನಾರಾಯಣರಾವ್,ಶಾಸಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ:</strong> ‘ಪಟ್ಟಣದಲ್ಲಿ ಖಾಲಿ ನಿವೇಶನಗಳಲ್ಲಿ ಹುಲ್ಲು, ಮುಳ್ಳುಕಂಟಿಗಳು ಬೆಳೆದಿವೆ. ಸ್ವಚ್ಛತೆ ಕಾಪಾಡುವಂತೆ ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡಬೇಕು’ ಎಂದು ಶಾಸಕ ಬಿ.ನಾರಾಯಣರಾವ್ ಅಧಿಕಾರಿಗಳಿಗೆ ಸೂಚಿಸಿದರು.</p>.<p>ಇಲ್ಲಿ ಶನಿವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.</p>.<p>`ಉದ್ಯಾನಕ್ಕಾಗಿ ಜಾಗ ಮತ್ತು ಸಿ.ಎ ಸೈಟ್ ಕಾಯ್ದಿರಿಸಿ ಅದರ ದಾಖಲೆಗಳನ್ನು ನಗರಸಭೆಗೆ ಸಲ್ಲಿಸದೆ ನಿವೇಶನ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಉದ್ಯಾನದ ಸ್ಥಳದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದರೆ ಅವುಗಳನ್ನು ನೆಲಸಮ ಮಾಡಬೇಕು’ ಎಂದರು.</p>.<p>‘ರಸ್ತೆ, ಚರಂಡಿ ನಿರ್ಮಾಣಕ್ಕೆ ಟೆಂಡರ್ ಪಡೆದು ನಿಗದಿತ ಸಮಯಕ್ಕೆ ಕೆಲಸ ನಿರ್ವಹಿಸದವರ ವಿರುದ್ಧ ಪ್ರಕರಣ ದಾಖಲಿಸಬೇಕು' ಎಂದು ತಾಕೀತು ಮಾಡಿದರು.</p>.<p>`ಪ್ರತಿ ವಾರ್ಡ್ನಲ್ಲಿ ಬಾಕಿ ಉಳಿದ ಕೆಲಸ ಮತ್ತು ಸಮಸ್ಯೆಗಳ ಬಗ್ಗೆ ನಗರಸಭೆ ಎಂಜಿನಿಯರ್ಗಳು ಎರಡು ವಾರದಲ್ಲಿ ಪಟ್ಟಿ ಸಿದ್ಧಪಡಿಸಬೇಕು. ನಗರಸಭೆಯ ಸೌಲಭ್ಯಗಳು, ಸಾಲದ ಯೋಜನೆ ಹಾಗೂ ಮಂಜೂರಾದ ಮನೆಗಳ ಮಾಹಿತಿ ಸದಸ್ಯರಿಗೆ ಹಾಗೂ ಇತರ ಜನಪ್ರತಿನಿಧಿಗಳಿಗೆ ಸುಲಭವಾಗಿ ದೊರಕುವುದಿಲ್ಲ. ಆದರೆ, ಈ ಬಗ್ಗೆ ದಲ್ಲಾಳಿಗಳ ಹತ್ತಿರ ಸಂಪೂರ್ಣ ವಿವರ ಇರುತ್ತದೆ. ಇಂಥ ವ್ಯವಸ್ಥೆ ಸಲ್ಲದು' ಎಂದು ಕಿಡಿ ಕಾರಿದರು.</p>.<p>`ಅಟೊ ನಗರದಲ್ಲಿ ಟಿಪ್ಪುಸುಲ್ತಾನ್ ವೃತ್ತ ನಿರ್ಮಿಸುವ ಬಗ್ಗೆ ಹಿಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಪ್ರತಿ ಒದಗಿಸಿದರೆ ಅದಕ್ಕಾಗಿ ಅನುದಾನ ಒದಗಿಸಲಾಗುವುದು. ಪಟ್ಟಣದಲ್ಲಿ ಇನ್ನೂ ಎರಡು ಇಂದಿರಾ ಕ್ಯಾಂಟೀನ್ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು' ಎಂದು ಹೇಳಿದರು.</p>.<p>ಸದಸ್ಯ ರವಿ ಗಾಯಕವಾಡ, `ನಗರೋತ್ಥಾನ ಯೋಜನೆಯಲ್ಲಿನ ಕುಂಬಾರಪಾಳಿ ರಸ್ತೆ ನಿರ್ಮಾಣ ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಪೌರಕಾರ್ಮಿಕರ ಬಾಕಿ ಇರುವ ವೇತನ ಪಾವತಿಸಬೇಕು' ಎಂದು ಆಗ್ರಹಿಸಿದರು.</p>.<p>ಅನಿಲ ಕುಲಕರ್ಣಿ ಮಾತನಾಡಿ, `ಪಟ್ಟಣದ ನಿವಾಸಿಗಳನ್ನು ಮಾತ್ರ ಪೌರಕಾರ್ಮಿಕರನ್ನಾಗಿ ನೇಮಿಸಿಕೊಳ್ಳಬೇಕು. 20 ಕಿ.ಮೀ ದೂರದಿಂದ ಬರುವವರಿಂದ ಕೆಲಸ ಆಗುವುದಿಲ್ಲ' ಎಂದರು.</p>.<p>ರವಿ ಕೊಳಕೂರ, `18 ನೇ ವಾರ್ಡ್ನ ಉದ್ಯಾನದಲ್ಲಿ ಪೈಪ್ಗಳನ್ನು ಇಡಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಅಗುತ್ತಿದೆ. ಶೀಘ್ರ ಅವುಗಳನ್ನು ತೆರವುಗೊಳಿಸಬೇಕು' ಎಂದು ಒತ್ತಾಯಿಸಿದರು.</p>.<p>`24 ಗಂಟೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯಲ್ಲಿ ಎಲ್ಲ ಓಣಿಗಳಲ್ಲಿ ಪೈಪ್ಲೈನ್ ಅಳವಡಿಸಿಲ್ಲ' ಎಂದು ಮುಜಮಿಲ್ ಸಗ್ಗೆ, ಪೇಶಮಾಮ್ ಆಕ್ರೋಶ ವ್ಯಕ್ತಪಡಿಸಿದರು.</p>.<p>ಅಧ್ಯಕ್ಷ ಅಜರಅಲಿ ನವರಂಗ ಮಾತನಾಡಿ, ` ಪ್ರತಿ ತಿಂಗಳು ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು' ಎಂದರು.</p>.<p>ಪೌರಾಯುಕ್ತ ಸುರೇಶ ಬಬಲಾದ ಸಭೆಯ ನಿರ್ಣಯಗಳನ್ನು ಓದಿದರು. ಅಕ್ತರ್ ಬಾಗ್, ಹಾಜರಾಬಿ ಇದ್ದರು. ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಮತ್ತು ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.</p>.<p>ಸ್ವಚ್ಛ ಮತ್ತು ಸುಂದರ ಬಸವಕಲ್ಯಾಣ ಆಗಬೇಕು. ಅದಕ್ಕಾಗಿ ರಸ್ತೆ, ಚರಂಡಿ ವ್ಯವಸ್ಥೆ ಉತ್ತಮಗೊಳಿಸಲು, ಉದ್ಯಾನಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳುತ್ತೇನೆ<br /><strong>-ಬಿ.ನಾರಾಯಣರಾವ್,ಶಾಸಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>