<p><strong>ಕಮಲನಗರ:</strong> ತಾಲ್ಲೂಕಿನ ವಿವಿಧ ಗ್ರಾಮಗಳೆಲ್ಲೆಡೆ ಬುಧವಾರ ಮಕರ ಸಂಕ್ರಾಂತಿ ಹಬ್ಬದ ಸಡಗರ. ಹೊಸ ವರ್ಷದ ಮೊದಲ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಈಗಾಗಲೇ ಜನರು ಸಿದ್ಧತೆ ಮಾಡಿಕೊಂಡಿದ್ದಾರೆ.</p>.<p>ಹಬ್ಬದ ಮುನ್ನಾ ದಿನ ಜನರು ಸಂತೆಯಲ್ಲಿ ಹಬ್ಬದ ವಸ್ತುಗಳಾದ ಸಿಹಿ ತಿನಿಸು, ವಸ್ತುಗಳನ್ನು ಖರೀದಿಸಿದರು.</p>.<p>ಅಲ್ಲಮಪ್ರಭು ವೃತ್ತಬಳಿ, ಸೋನಾಳ ರಸ್ತೆ ಬದಿ, ಉದಗೀರ ರಸ್ತೆ ಬಳಿ ರೈತರು ಕಬ್ಬಿನ ಜಲ್ಲೆಯನ್ನು ಮಾರಾಟ ಮಾಡುತ್ತಿದ್ದ ದೃಶ್ಯ ಕಂಡುಬಂದಿತು. ಒಂದು ಜತೆ ಕಬ್ಬಿನ ಜತೆ ₹40 ರಿಂದ 50ರವರೆಗೆ ಮಾರಾಟವಾಯಿತು.</p>.<p>ಈ ಬಾರಿ ಹೂ, ಹಣ್ಣುಗಳ ಬೆಲೆಯಲ್ಲಿ ತುಸು ಇಳಿಕೆ ಕಂಡು ಬಂದಿತು. ಎಳ್ಳು, ಬೆಲ್ಲ, ಕಬ್ಬಿನ ತುಂಡು, ವಠಾಣಿ, ಬೋರೆಹಣ್ಣು, ಚಾಪಳಕಾಯಿ, ಖರ್ಜೂರ, ಶೇಂಗಾ, ಕುಸುರೆಳ್ಳು, ಗಜ್ಜರಿ, ಸಕ್ಕರೆ,ಒಣಕೊಬ್ಬರಿ, ಕ್ಯಾರೆಕಾಯಿ, ಸಜ್ಜಿಗೆ ಅಚ್ಚುಗಳನ್ನು ಜನರು ಹೆಚ್ಚಾಗಿ ಖರೀದಿಸಿದರು.</p>.<p>ಮಕರ ಸಂಕ್ರಾತಿ ಹಬ್ಬದ ನಂತರ ಸೂರ್ಯನು ತನ್ನ ಪಥವನ್ನು ಬದಲಾಯಿಸುವ ಹಿನ್ನಲೆಯಲ್ಲಿ ಕಮಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಎಲ್ಲಾ ದೇವಸ್ಥಾನಗಲ್ಲಿಯೂ ಎಳ್ಳು-ಅರಸಿಣ ಮಿಶ್ರಣದಿಂದ ತಯಾರಿಸಿದ ಪೇಸ್ಟ್ನಿಂದ ಬುಧವಾರ ತೊಳೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹೀಗಾಗಿ ಹಬ್ಬದ ಮುನ್ನಾ ದಿನವಾದ ಮಂಗಳವಾರ ಮಹಿಳೆಯರು ಭೋಗಿ ಎಂದು ನೀರು ಹೊಯ್ದುಕೊಂಡು ವಿಶೇಷವಾಗಿ ತೈಯಾರಿಸಿದ ಪಕ್ವಾನ ದೇವಸ್ಥಾನಗಳಲ್ಲಿ ಸಂಕ್ರಾಂತಿಯ ಪೂಜೆ ಮಾಡಿದರು.</p>.<p><strong>ಕೆಲವೆಡೆ ಮಂಗಳವಾರ ಆಚರಣೆ: </strong>ಮಹಾರಾಷ್ಟ್ರದ ಉದಗೀರ, ತೋಗರಿ, ದೇವಣಿ, ಮೋಘಾ ಮತ್ತು ತಾಲ್ಲೂಕಿನ ಸುತ್ತಮುತ್ತಲಿನ ಕೆಲ ಭಾಗಗಳಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಮಂಗಳವಾರ ಆಚರಿಸಲಾಯಿತು. ಸಂಜೆ ಯುವತಿಯರು, ಮಹಿಳೆಯರು ಹಾಗೂ ಮಕ್ಕಳು ಹೊಸಬಟ್ಟೆ ಧರಿಸಿ ಎಳ್ಳುಬೆಲ್ಲ ವಿನಿಮಯ ಮಾಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲನಗರ:</strong> ತಾಲ್ಲೂಕಿನ ವಿವಿಧ ಗ್ರಾಮಗಳೆಲ್ಲೆಡೆ ಬುಧವಾರ ಮಕರ ಸಂಕ್ರಾಂತಿ ಹಬ್ಬದ ಸಡಗರ. ಹೊಸ ವರ್ಷದ ಮೊದಲ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಈಗಾಗಲೇ ಜನರು ಸಿದ್ಧತೆ ಮಾಡಿಕೊಂಡಿದ್ದಾರೆ.</p>.<p>ಹಬ್ಬದ ಮುನ್ನಾ ದಿನ ಜನರು ಸಂತೆಯಲ್ಲಿ ಹಬ್ಬದ ವಸ್ತುಗಳಾದ ಸಿಹಿ ತಿನಿಸು, ವಸ್ತುಗಳನ್ನು ಖರೀದಿಸಿದರು.</p>.<p>ಅಲ್ಲಮಪ್ರಭು ವೃತ್ತಬಳಿ, ಸೋನಾಳ ರಸ್ತೆ ಬದಿ, ಉದಗೀರ ರಸ್ತೆ ಬಳಿ ರೈತರು ಕಬ್ಬಿನ ಜಲ್ಲೆಯನ್ನು ಮಾರಾಟ ಮಾಡುತ್ತಿದ್ದ ದೃಶ್ಯ ಕಂಡುಬಂದಿತು. ಒಂದು ಜತೆ ಕಬ್ಬಿನ ಜತೆ ₹40 ರಿಂದ 50ರವರೆಗೆ ಮಾರಾಟವಾಯಿತು.</p>.<p>ಈ ಬಾರಿ ಹೂ, ಹಣ್ಣುಗಳ ಬೆಲೆಯಲ್ಲಿ ತುಸು ಇಳಿಕೆ ಕಂಡು ಬಂದಿತು. ಎಳ್ಳು, ಬೆಲ್ಲ, ಕಬ್ಬಿನ ತುಂಡು, ವಠಾಣಿ, ಬೋರೆಹಣ್ಣು, ಚಾಪಳಕಾಯಿ, ಖರ್ಜೂರ, ಶೇಂಗಾ, ಕುಸುರೆಳ್ಳು, ಗಜ್ಜರಿ, ಸಕ್ಕರೆ,ಒಣಕೊಬ್ಬರಿ, ಕ್ಯಾರೆಕಾಯಿ, ಸಜ್ಜಿಗೆ ಅಚ್ಚುಗಳನ್ನು ಜನರು ಹೆಚ್ಚಾಗಿ ಖರೀದಿಸಿದರು.</p>.<p>ಮಕರ ಸಂಕ್ರಾತಿ ಹಬ್ಬದ ನಂತರ ಸೂರ್ಯನು ತನ್ನ ಪಥವನ್ನು ಬದಲಾಯಿಸುವ ಹಿನ್ನಲೆಯಲ್ಲಿ ಕಮಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಎಲ್ಲಾ ದೇವಸ್ಥಾನಗಲ್ಲಿಯೂ ಎಳ್ಳು-ಅರಸಿಣ ಮಿಶ್ರಣದಿಂದ ತಯಾರಿಸಿದ ಪೇಸ್ಟ್ನಿಂದ ಬುಧವಾರ ತೊಳೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹೀಗಾಗಿ ಹಬ್ಬದ ಮುನ್ನಾ ದಿನವಾದ ಮಂಗಳವಾರ ಮಹಿಳೆಯರು ಭೋಗಿ ಎಂದು ನೀರು ಹೊಯ್ದುಕೊಂಡು ವಿಶೇಷವಾಗಿ ತೈಯಾರಿಸಿದ ಪಕ್ವಾನ ದೇವಸ್ಥಾನಗಳಲ್ಲಿ ಸಂಕ್ರಾಂತಿಯ ಪೂಜೆ ಮಾಡಿದರು.</p>.<p><strong>ಕೆಲವೆಡೆ ಮಂಗಳವಾರ ಆಚರಣೆ: </strong>ಮಹಾರಾಷ್ಟ್ರದ ಉದಗೀರ, ತೋಗರಿ, ದೇವಣಿ, ಮೋಘಾ ಮತ್ತು ತಾಲ್ಲೂಕಿನ ಸುತ್ತಮುತ್ತಲಿನ ಕೆಲ ಭಾಗಗಳಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಮಂಗಳವಾರ ಆಚರಿಸಲಾಯಿತು. ಸಂಜೆ ಯುವತಿಯರು, ಮಹಿಳೆಯರು ಹಾಗೂ ಮಕ್ಕಳು ಹೊಸಬಟ್ಟೆ ಧರಿಸಿ ಎಳ್ಳುಬೆಲ್ಲ ವಿನಿಮಯ ಮಾಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>