ಶ್ರೀಗಳು ಮಧುಕರಿಯಲ್ಲಿ ಬಂದರೊಟ್ಟಿ, ಪಲ್ಯ, ಚಟ್ನಿ-ಚಪಾತಿ, ಪುಂಡಿ ಪಲ್ಯ, ಹಿಂಡಿ-ಖಾರ ಮಾತ್ರ ಶ್ರೀ ದತ್ತನಿಗೆ ನೈವೈದ್ಯ ಮಾಡಿ, ಅದನ್ನೇ ರಾತ್ರಿ 11 ಗಂಟೆಯ ಬಳಿಕ ದತ್ತ ಪ್ರಸಾದ ಎಂದು ಸ್ವೀಕರಿಸುತ್ತಿದ್ದರು. ಇಂದಿಗೂ ನಿತ್ಯ ಮಧುಕರಿ ನೈವೈದ್ಯವನ್ನು ಶ್ರೀ ಮಾಣಿಕಪ್ರಭುಗಳ ಸಮಾಧಿಗೆ ಅರ್ಪಿಸಿದ ನಂತರ ಜಾತ್ರೆಗೆ ಬಂದಂತಹ ಭಕ್ತರಿಗೆ ದಾಸೋಹದಲ್ಲಿ ಅದನ್ನು ವಿತರಿಸಲಾಗುತ್ತಿದೆ.