<p><strong>ಹುಮನಾಬಾದ್: </strong>ಸಮೀಪದ ಮಾಣಿಕನಗರದಲ್ಲಿ ದತ್ತ ಜಯಂತಿ ಮತ್ತು ಮಾಣಿಕಪ್ರಭುಗಳ 202ನೇ ಜನ್ಮದಿನೋತ್ಸವ ಕಾರ್ಯಕ್ರಮ ಲಕ್ಷಾಂತರ ಭಕ್ತರ ಮಧ್ಯೆ ಗುರುವಾರ ಸಂಭ್ರಮದಿಂದ ಜರುಗಿತು.</p>.<p>ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿ ಡಾ.ಜ್ಞಾನರಾಜ ಮಹಾರಾಜರ ಸಾನ್ನಿಧ್ಯದಲ್ಲಿ ಬೆಳಿಗ್ಗೆ ಶಹನಾಯಿ ವಾದನ, ನಂತರ ನೂರಾರು ವೈದಿಕರಿಂದ ಮಾಣಿಕಪ್ರಭುಗಳ ಸಂಜೀವಿನಿ ಸಮಾಧಿಗೆ ಮಹಾರುದ್ರಾಭಿಷೇಕ ಹಾಗೂ ಕಾಕಡಾರತಿ ನೆರವೇರಿತು.</p>.<p>ಮಧ್ಯಾಹ್ನ ಶ್ರೀಗಳ ಪಾದಪೂಜೆ ಸಂಜೆ ಪ್ರಭುಗಳ ರಾಜೋಪಚಾರ ಸೇವೆ ಮತ್ತು ನಾಲ್ಕು ವೇದ, ಪುರಾಣ ಶಾಸ್ತ್ರ, ವ್ಯಾಕರಣ, ಮಿಮಾಂಸೆ, ನೃತ್ಯ, ಸಂಗೀತ ಹಾಗೂ ವಾದ್ಯ ಸೇವೆಗಳು ಜರುಗಿದವು.</p>.<p>ಮಾಣಿಕನಗರ ಗ್ರಾಮಸ್ಥರಿಂದರಾತ್ರಿ ಮಾಧುಕರಿ ಸೇವೆ ಜರುಗಿತು.</p>.<p>ದತ್ತ ಕ್ಷೇತ್ರದಲ್ಲಿ ಮಧುಕರಿಗೆ ವಿಶೇಷ ಮಹತ್ವವಿದೆ. ಅಂದಿನ ಕಾಲದಲ್ಲಿ ಮಾಣಿಕಪ್ರಭುಗಳು ಎಂದೂ ಮಧುಕರಿ ಊಟ ಬಿಟ್ಟು, ಬೇರೆ ಊಟ ಮಾಡುತ್ತಿರಲ್ಲಿಲ್ಲ. ನಿತ್ಯ ಅವರ ಇಬ್ಬರು ಶಿಷ್ಯರು ಮಧುಕರಿ ಬೇಡಿ ತರುತ್ತಿದ್ದರು.</p>.<p>ಶ್ರೀಗಳು ಮಧುಕರಿಯಲ್ಲಿ ಬಂದರೊಟ್ಟಿ, ಪಲ್ಯ, ಚಟ್ನಿ-ಚಪಾತಿ, ಪುಂಡಿ ಪಲ್ಯ, ಹಿಂಡಿ-ಖಾರ ಮಾತ್ರ ಶ್ರೀ ದತ್ತನಿಗೆ ನೈವೈದ್ಯ ಮಾಡಿ, ಅದನ್ನೇ ರಾತ್ರಿ 11 ಗಂಟೆಯ ಬಳಿಕ ದತ್ತ ಪ್ರಸಾದ ಎಂದು ಸ್ವೀಕರಿಸುತ್ತಿದ್ದರು. ಇಂದಿಗೂ ನಿತ್ಯ ಮಧುಕರಿ ನೈವೈದ್ಯವನ್ನು ಶ್ರೀ ಮಾಣಿಕಪ್ರಭುಗಳ ಸಮಾಧಿಗೆ ಅರ್ಪಿಸಿದ ನಂತರ ಜಾತ್ರೆಗೆ ಬಂದಂತಹ ಭಕ್ತರಿಗೆ ದಾಸೋಹದಲ್ಲಿ ಅದನ್ನು ವಿತರಿಸಲಾಗುತ್ತಿದೆ.</p>.<p>ಮಾಣಿಕನಗರ ಗ್ರಾಮಸ್ಥರು ತಯಾರಿಸಿದ ರೊಟ್ಟಿ, ಪಲ್ಯ ಸವಿಯಲು ಸಾವಿರಾರು ಭಕ್ತರು ಸರತಿಯಲ್ಲಿ ಬಂದು ಮಧುಕರಿ ಪ್ರಸಾದ ಸೇವಿಸಿದರು. ರಾತ್ರಿ8 ರಿಂದ ಬೆಳಿಗ್ಗೆ 5 ರವರೆಗೆ ಮಹಾಪ್ರಸಾದ ದಾಸೋಹ ನಡೆಯಿತು.</p>.<p>ಸಂಸ್ಥಾನ ಅಧ್ಯಕ್ಷ ಆನಂದರಾಜ ಪ್ರಭುಗಳು, ಸಹ ಕಾರ್ಯದರ್ಶಿ ಚೈತನ್ಯರಾಜ ಪ್ರಭುಗಳ ನೇತೃತ್ವದಲ್ಲಿ ಮಹಾಪ್ರಸಾದ ವಿತರಣೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಮನಾಬಾದ್: </strong>ಸಮೀಪದ ಮಾಣಿಕನಗರದಲ್ಲಿ ದತ್ತ ಜಯಂತಿ ಮತ್ತು ಮಾಣಿಕಪ್ರಭುಗಳ 202ನೇ ಜನ್ಮದಿನೋತ್ಸವ ಕಾರ್ಯಕ್ರಮ ಲಕ್ಷಾಂತರ ಭಕ್ತರ ಮಧ್ಯೆ ಗುರುವಾರ ಸಂಭ್ರಮದಿಂದ ಜರುಗಿತು.</p>.<p>ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿ ಡಾ.ಜ್ಞಾನರಾಜ ಮಹಾರಾಜರ ಸಾನ್ನಿಧ್ಯದಲ್ಲಿ ಬೆಳಿಗ್ಗೆ ಶಹನಾಯಿ ವಾದನ, ನಂತರ ನೂರಾರು ವೈದಿಕರಿಂದ ಮಾಣಿಕಪ್ರಭುಗಳ ಸಂಜೀವಿನಿ ಸಮಾಧಿಗೆ ಮಹಾರುದ್ರಾಭಿಷೇಕ ಹಾಗೂ ಕಾಕಡಾರತಿ ನೆರವೇರಿತು.</p>.<p>ಮಧ್ಯಾಹ್ನ ಶ್ರೀಗಳ ಪಾದಪೂಜೆ ಸಂಜೆ ಪ್ರಭುಗಳ ರಾಜೋಪಚಾರ ಸೇವೆ ಮತ್ತು ನಾಲ್ಕು ವೇದ, ಪುರಾಣ ಶಾಸ್ತ್ರ, ವ್ಯಾಕರಣ, ಮಿಮಾಂಸೆ, ನೃತ್ಯ, ಸಂಗೀತ ಹಾಗೂ ವಾದ್ಯ ಸೇವೆಗಳು ಜರುಗಿದವು.</p>.<p>ಮಾಣಿಕನಗರ ಗ್ರಾಮಸ್ಥರಿಂದರಾತ್ರಿ ಮಾಧುಕರಿ ಸೇವೆ ಜರುಗಿತು.</p>.<p>ದತ್ತ ಕ್ಷೇತ್ರದಲ್ಲಿ ಮಧುಕರಿಗೆ ವಿಶೇಷ ಮಹತ್ವವಿದೆ. ಅಂದಿನ ಕಾಲದಲ್ಲಿ ಮಾಣಿಕಪ್ರಭುಗಳು ಎಂದೂ ಮಧುಕರಿ ಊಟ ಬಿಟ್ಟು, ಬೇರೆ ಊಟ ಮಾಡುತ್ತಿರಲ್ಲಿಲ್ಲ. ನಿತ್ಯ ಅವರ ಇಬ್ಬರು ಶಿಷ್ಯರು ಮಧುಕರಿ ಬೇಡಿ ತರುತ್ತಿದ್ದರು.</p>.<p>ಶ್ರೀಗಳು ಮಧುಕರಿಯಲ್ಲಿ ಬಂದರೊಟ್ಟಿ, ಪಲ್ಯ, ಚಟ್ನಿ-ಚಪಾತಿ, ಪುಂಡಿ ಪಲ್ಯ, ಹಿಂಡಿ-ಖಾರ ಮಾತ್ರ ಶ್ರೀ ದತ್ತನಿಗೆ ನೈವೈದ್ಯ ಮಾಡಿ, ಅದನ್ನೇ ರಾತ್ರಿ 11 ಗಂಟೆಯ ಬಳಿಕ ದತ್ತ ಪ್ರಸಾದ ಎಂದು ಸ್ವೀಕರಿಸುತ್ತಿದ್ದರು. ಇಂದಿಗೂ ನಿತ್ಯ ಮಧುಕರಿ ನೈವೈದ್ಯವನ್ನು ಶ್ರೀ ಮಾಣಿಕಪ್ರಭುಗಳ ಸಮಾಧಿಗೆ ಅರ್ಪಿಸಿದ ನಂತರ ಜಾತ್ರೆಗೆ ಬಂದಂತಹ ಭಕ್ತರಿಗೆ ದಾಸೋಹದಲ್ಲಿ ಅದನ್ನು ವಿತರಿಸಲಾಗುತ್ತಿದೆ.</p>.<p>ಮಾಣಿಕನಗರ ಗ್ರಾಮಸ್ಥರು ತಯಾರಿಸಿದ ರೊಟ್ಟಿ, ಪಲ್ಯ ಸವಿಯಲು ಸಾವಿರಾರು ಭಕ್ತರು ಸರತಿಯಲ್ಲಿ ಬಂದು ಮಧುಕರಿ ಪ್ರಸಾದ ಸೇವಿಸಿದರು. ರಾತ್ರಿ8 ರಿಂದ ಬೆಳಿಗ್ಗೆ 5 ರವರೆಗೆ ಮಹಾಪ್ರಸಾದ ದಾಸೋಹ ನಡೆಯಿತು.</p>.<p>ಸಂಸ್ಥಾನ ಅಧ್ಯಕ್ಷ ಆನಂದರಾಜ ಪ್ರಭುಗಳು, ಸಹ ಕಾರ್ಯದರ್ಶಿ ಚೈತನ್ಯರಾಜ ಪ್ರಭುಗಳ ನೇತೃತ್ವದಲ್ಲಿ ಮಹಾಪ್ರಸಾದ ವಿತರಣೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>