‘ಸಾಹಿತಿ ಸಂಗಮ’ ಕಾರ್ಯಕ್ರಮದ ಅಡಿಯಲ್ಲಿ ಬಿಡುವಿಲ್ಲದಂತೆ ನಗರದಾದ್ಯಂತ ಸಂಚರಿಸಿ ಸಾಹಿತಿಗಳ ಮನೆಗಳಿಗೆ ಭೇಟಿ ನೀಡಿದರು. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸಾಹಿತ್ಯ ಕೃತಿಗಳನ್ನು ವಿತರಿಸಿದರು.
ಸಾಹಿತಿಗಳಾದ ಸಂಜೀವಕುಮಾರ ಅತಿವಾಳೆ, ರಮೇಶ ಬಿರಾದಾರ, ಎಸ್.ಎಂ.ಜನವಾಡಕರ್, ರಘುಶಂಖ ಭಾತಂಬ್ರಾ, ಪ್ರೊ.ಎಸ್.ವಿ.ಕಲ್ಮಠ, ರಘುನಾಥ ಹಡಪದ, ಸುನೀತಾ ಬಿರಾದಾರ, ಅಕ್ಕ ಅನ್ನಪೂರ್ಣ, ವಿಮರ್ಶಕಿ ರಜಿಯಾ ಬಳಬಟ್ಟಿ, ಕತೆಗಾರ ಗುರುನಾಥ ಅಕ್ಕಣ್ಣ, ಲೇಖಕಿಯರಾದ ಜಗದೇವಿ ದುಬಲಗುಂಡಿ, ಪುಷ್ಪಾ ಕನಕ, ಕಾಶೀನಾಥ ಚಲುವಾ, ಪ್ರೊ.ಓಂಪ್ರಕಾಶ ದಡ್ಡೆ, ಸುನೀತಾ ದಾಡಗೆ, ಸುಭಾಷ ನೇಳಗೆ, ಸಾಧನಾ ರಂಜೋಳಕರ್, ಕವಿಯತ್ರಿ ಶ್ರೀದೇವಿ ಹೂಗಾರ ಹಾಗೂ ಮೇನಕಾ ಪಾಟೀಲ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.