<p><strong>ಚಿಟ್ಟಾವಾಡಿ (ಜನವಾಡ):</strong> ಮಂಗ ದಾಳಿಯಿಂದ ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ಬೀದರ್ ತಾಲ್ಲೂಕಿನ ಚಿಟ್ಟಾವಾಡಿಯಲ್ಲಿ ಬುಧವಾರ ನಡೆದಿದೆ.</p>.<p>ಗ್ರಾಮದ ಲಲಿತಾ ಮಲ್ಲಪ್ಪ ಗಾಯಗೊಂಡಿದ್ದು, ಬೀದರ್ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮನೆಗೆ ಮರಳಿದ್ದಾರೆ. <br> ಲಲಿತಾ ಅವರು ಮನೆ ಅಂಗಳದಲ್ಲಿ ಬಟ್ಟೆ ಒಗೆಯುತ್ತಿದ್ದಾಗ, ಹಿಂದಿನಿಂದ ಬಂದ ಮಂಗ ಅವರ ಬೆನ್ನಿಗೆ ಕಚ್ಚಿದೆ. ಬೆನ್ನಿಗೆ ಹೊಲಿಗೆಗಳು ಬಿದ್ದಿವೆ ಎಂದು ಲಿಲಿತಾ ಅವರ ಸಂಬಂಧಿ ರಾಜಕುಮಾರ ಕಡ್ಯಾಳ್ ತಿಳಿಸಿದರು.</p>.<p>‘ಗ್ರಾಮದಲ್ಲಿ ಒಂದು ತಿಂಗಳಿಂದ ಮಂಗಗಳ ಹಾವಳಿ ಹೆಚ್ಚಾಗಿದೆ. ಅನೇಕರ ಮೇಲೆ ದಾಳಿ ಮಾಡಿ, ಗಾಯಗೊಳಿಸಿವೆ. ಮಂಗಗಳು ಗುಂಪು ಗುಂಪಾಗಿ ಓಡಾಡುತ್ತಿವೆ. ಬೇವಿನ ಮರದ ಮೇಲೆ ಕುಳಿತುಕೊಳ್ಳುತ್ತಿವೆ. ಪರಸ್ಪರ ಜಗಳವಾಡುತ್ತ ಊರಲ್ಲಿ ಬರುತ್ತಿವೆ. ಎದುರಿಗೆ ಬಂದವರ ಮೇಲೆ ದಾಳಿ ನಡೆಸುತ್ತಿವೆ’ ಎಂದರು.</p>.<p>‘ಬೀದರ್ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ದಶರಥ ಮೋರಗಿ ಮಾತನಾಡಿ,‘ಪಟಾಕಿ ಹಚ್ಚಿದರೂ ಮಂಗಗಳು ಓಡಿ ಹೋಗುತ್ತಿಲ್ಲ. ಬಡಿಗೆ ತೋರಿಸಿದರೂ ಮೈ ಮೇಲೆ ಬರುತ್ತಿವೆ. ಮಂಗಗಳು ಚಿಟ್ಟಾವಾಡಿ, ಚಿಟ್ಟಾ ಹಾಗೂ ಅಮಲಾಪುರದಲ್ಲಿ ಅನೇಕರ ಮೇಲೆ ದಾಳಿ ನಡೆಸಿವೆ’ ಎಂದು ತಿಳಿಸಿದರು.</p>.<p>‘ಚಿಟ್ಟಾವಾಡಿಯ ನಾಗಮ್ಮ ಚಂದ್ರಕಾಂತ, ಜಗದೇವಿ ಸಾಯಿಬಣ್ಣ, ಹಣಮಂತ ರಾಜೋಳೆ, ತೇಜಮ್ಮ ಅರ್ಜುನ, ಲಲಿತಾ ಮಲ್ಲಪ್ಪ ಮೊದಲಾದವರ ಮೇಲೆ ದಾಳಿ ಮಾಡಿವೆ. ಎರಡು ವಾರದ ಹಿಂದೆ ನನ್ನ ಮೇಲೂ ದಾಳಿಗೆ ಪ್ರಯತ್ನಿಸಿದ್ದವು. ಕೈಯಲ್ಲಿ ಬಡಿಗೆ ಹಿಡಿದುಕೊಂಡಿದ್ದರಿಂದ ಬಚಾವಾಗಿದ್ದೆ’ ಎಂದರು.</p>.<p>‘ಮಂಗಗಳ ಉಪಟಳದ ಕಾರಣ ಜನ ಹೊಲಗಳಿಗೆ ಹೋಗಲು ಹೆದರುತ್ತಿದ್ದಾರೆ. ಪಾಲಕರು ಮಕ್ಕಳಿಗೆ ಹೊರಗಡೆ ಆಟವಾಡಲು ಬಿಡುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಮಂಗಗಳ ಕಾಟ ತಪ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಟ್ಟಾವಾಡಿ (ಜನವಾಡ):</strong> ಮಂಗ ದಾಳಿಯಿಂದ ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ಬೀದರ್ ತಾಲ್ಲೂಕಿನ ಚಿಟ್ಟಾವಾಡಿಯಲ್ಲಿ ಬುಧವಾರ ನಡೆದಿದೆ.</p>.<p>ಗ್ರಾಮದ ಲಲಿತಾ ಮಲ್ಲಪ್ಪ ಗಾಯಗೊಂಡಿದ್ದು, ಬೀದರ್ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮನೆಗೆ ಮರಳಿದ್ದಾರೆ. <br> ಲಲಿತಾ ಅವರು ಮನೆ ಅಂಗಳದಲ್ಲಿ ಬಟ್ಟೆ ಒಗೆಯುತ್ತಿದ್ದಾಗ, ಹಿಂದಿನಿಂದ ಬಂದ ಮಂಗ ಅವರ ಬೆನ್ನಿಗೆ ಕಚ್ಚಿದೆ. ಬೆನ್ನಿಗೆ ಹೊಲಿಗೆಗಳು ಬಿದ್ದಿವೆ ಎಂದು ಲಿಲಿತಾ ಅವರ ಸಂಬಂಧಿ ರಾಜಕುಮಾರ ಕಡ್ಯಾಳ್ ತಿಳಿಸಿದರು.</p>.<p>‘ಗ್ರಾಮದಲ್ಲಿ ಒಂದು ತಿಂಗಳಿಂದ ಮಂಗಗಳ ಹಾವಳಿ ಹೆಚ್ಚಾಗಿದೆ. ಅನೇಕರ ಮೇಲೆ ದಾಳಿ ಮಾಡಿ, ಗಾಯಗೊಳಿಸಿವೆ. ಮಂಗಗಳು ಗುಂಪು ಗುಂಪಾಗಿ ಓಡಾಡುತ್ತಿವೆ. ಬೇವಿನ ಮರದ ಮೇಲೆ ಕುಳಿತುಕೊಳ್ಳುತ್ತಿವೆ. ಪರಸ್ಪರ ಜಗಳವಾಡುತ್ತ ಊರಲ್ಲಿ ಬರುತ್ತಿವೆ. ಎದುರಿಗೆ ಬಂದವರ ಮೇಲೆ ದಾಳಿ ನಡೆಸುತ್ತಿವೆ’ ಎಂದರು.</p>.<p>‘ಬೀದರ್ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ದಶರಥ ಮೋರಗಿ ಮಾತನಾಡಿ,‘ಪಟಾಕಿ ಹಚ್ಚಿದರೂ ಮಂಗಗಳು ಓಡಿ ಹೋಗುತ್ತಿಲ್ಲ. ಬಡಿಗೆ ತೋರಿಸಿದರೂ ಮೈ ಮೇಲೆ ಬರುತ್ತಿವೆ. ಮಂಗಗಳು ಚಿಟ್ಟಾವಾಡಿ, ಚಿಟ್ಟಾ ಹಾಗೂ ಅಮಲಾಪುರದಲ್ಲಿ ಅನೇಕರ ಮೇಲೆ ದಾಳಿ ನಡೆಸಿವೆ’ ಎಂದು ತಿಳಿಸಿದರು.</p>.<p>‘ಚಿಟ್ಟಾವಾಡಿಯ ನಾಗಮ್ಮ ಚಂದ್ರಕಾಂತ, ಜಗದೇವಿ ಸಾಯಿಬಣ್ಣ, ಹಣಮಂತ ರಾಜೋಳೆ, ತೇಜಮ್ಮ ಅರ್ಜುನ, ಲಲಿತಾ ಮಲ್ಲಪ್ಪ ಮೊದಲಾದವರ ಮೇಲೆ ದಾಳಿ ಮಾಡಿವೆ. ಎರಡು ವಾರದ ಹಿಂದೆ ನನ್ನ ಮೇಲೂ ದಾಳಿಗೆ ಪ್ರಯತ್ನಿಸಿದ್ದವು. ಕೈಯಲ್ಲಿ ಬಡಿಗೆ ಹಿಡಿದುಕೊಂಡಿದ್ದರಿಂದ ಬಚಾವಾಗಿದ್ದೆ’ ಎಂದರು.</p>.<p>‘ಮಂಗಗಳ ಉಪಟಳದ ಕಾರಣ ಜನ ಹೊಲಗಳಿಗೆ ಹೋಗಲು ಹೆದರುತ್ತಿದ್ದಾರೆ. ಪಾಲಕರು ಮಕ್ಕಳಿಗೆ ಹೊರಗಡೆ ಆಟವಾಡಲು ಬಿಡುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಮಂಗಗಳ ಕಾಟ ತಪ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>